ಶೂಟೌಟ್ ನಲ್ಲಿ ಸಾವನ್ನಪ್ಪಿದ್ದ ರಮೇಶ್ ಅವರ ಮಗಳು ಗೌತಮಿ ಅವರ ಮೃತ ದೇಹವನ್ನು ನಗರದ ವೈದೇಹಿ ಆಸ್ಪತ್ರೆಯ ವೈದ್ಯರು ಮರಣೋತ್ತರ ಪರೀಕ್ಷೆಯನ್ನು ನಡೆಸಿದ್ದರು. ಬಳಿಕ ದೇಹವನ್ನು ಕಾಲೇಜಿನ ಮುಂದೆ ಇರಿಸಿ ಪ್ರತಿಭಟನೆ ನಡೆಸಲು ವಿದ್ಯಾರ್ಥಿನಿ ಪೋಷಕರು ನಿರ್ಧರಿಸಿದ್ದರು. ಆದರೆ ಪೊಲೀಸರು ಕಾಲೇಜಿಗೆ ಮೃತ ದೇಹವನ್ನು ತೆಗೆದುಕೊಂಡು ಹೋಗಲು ಅವಕಾಶ ನೀಡಲಿಲ್ಲ. ಈ ಹಿನ್ನೆಲೆಯಲ್ಲಿ ಮೃತ ದೇಹವನ್ನು ಹುಟ್ಟೂರು ಪಾವಗಡಕ್ಕೆ ಸಾಗಿಸಲಾಗುತ್ತಿದೆ.