ಸುಧಾಕರ್ ಶೆಟ್ಟಿಯೇ ವಾಚ್ ತಮ್ಮದಲ್ಲವೆಂದು ಹೇಳಿದ್ದಾರೆ: ಕುಮಾರಸ್ವಾಮಿಗೆ ಸಿಎಂ ತಿರುಗೇಟು

ಶುಕ್ರವಾರ, 26 ಫೆಬ್ರವರಿ 2016 (17:04 IST)
ನಾನು ಕಟ್ಟಿದ್ದ ವಾಚ್ ತಮ್ಮದಲ್ಲವೆಂದು ಡಾ.ಸುಧಾಕರ್ ಶೆಟ್ಟಿಯವರು ಹೇಳಿದ್ದರಿಂದ ಕುಮಾರಸ್ವಾಮಿ ಆರೋಪಗಳಲ್ಲಿ ಸತ್ಯಾಂಶವಿಲ್ಲ ಎನ್ನುವುದು ಸಾಬೀತಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. 
 
ಮಾಜಿ ಮುಖ್ಯಮಂತ್ರಿಯಾದ ಎಚ್.ಡಿ.ಕುಮಾರಸ್ವಾಮಿ ಪ್ರೌಢತೆಯಿಂದ ಮಾತನಾಡಬೇಕು. ಅವರೊಬ್ಬ ಮಾಜಿ ಪ್ರಧಾನಮಂತ್ರಿಯವರ ಪುತ್ರ ಕೂಡಾ ಆಗಿದ್ದಾರೆ. ತಮ್ಮ ಘನತೆಗೆ ತಕ್ಕಂತೆ ವರ್ತಿಸುವುದು ಸೂಕ್ತ ಎಂದು ಹೇಳಿದ್ದಾರೆ. 
 
ನನ್ನ ಬಳಿಯಿರುವ ವಾಚ್ ಯಾವ ಕಂಪೆನಿಯದ್ದಾಗಿದೆ ಎನ್ನುವ ಬಗ್ಗೆ ಖುದ್ದಾಗಿ ನನಗೆ ಗೊತ್ತಿಲ್ಲ. ಕೇವಲ ಆಧಾರರಹಿತ ಆರೋಪಗಳನ್ನು ಮಾಡುವುದು ರಾಜಕಾರಣಿಗಳಿಗೆ ಶೋಭೆ ತರುವುದಿಲ್ಲ ಎಂದು ತಿಳಿಸಿದ್ದಾರೆ.
 
ಗೆಳೆಯ ಗಿರೀಶ್ ಚಂದ್ರ ಶರ್ಮಾ ನೀಡಿದ ಗಿಫ್ಟ್ ವಾಚ್ ಕುರಿತಂತೆ ಈಗಾಗಲೇ ಸ್ಪಷ್ಟನೆ ನೀಡಿದ್ದೇನೆ. ಪದೇ ಪದೇ ವಾಚ್ ಬಗ್ಗೆ ಹೇಳಿಕೆ ನೀಡುವುದು ಸರಿಯಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ