ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ಕೊಲ್ಲೂರು ಸ್ವಾಮಿ ಎಂದು ಹೇಳಲಾಗಿದ್ದು, ಈತ ತನ್ನ ಮೂವರೂ ಮಕ್ಕಳಿಗೆ ವಿಷ ಉಣಿಸಿ ಆತ್ಮಹತ್ಯೆಗೆ ಯತ್ನಿಸಿದವನಾಗಿದ್ದಾನೆ. ಇನ್ನು ತಂದೆಯೂ ಸೇರಿ ನಾಲ್ವರೂ ಕೂಡ ತೀವ್ರವಾಗಿ ಅಸ್ವಸ್ಥರಾಗಿದ್ದರು. ಅಲ್ಲದೆ ಸಾವು ಬದುಕಿನ ನಡುವೆ ಹೋರಾಡುತ್ತಿದ್ದರು ಎನ್ನಲಾಗಿದ್ದು, ಇಧನ್ನು ಕಂಡ ನಗರದಲ್ಲಿನ ಸ್ಥಳೀಯರು ವಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಪರಿಣಾಮ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪ್ರಕರಣದ ಹಿನ್ನೆಲೆ: ಪತಿ ಕೊಲ್ಲೂರು ಸ್ವಾಮಿ ಹಾಗೂ ಆತ ಪತ್ನಿ ದುರ್ಗಮ್ಮ ಅವರ ನಡುವೆ ಪ್ರತಿನಿತ್ಯ ಜಗಳವಾಗುತ್ತಿತ್ತು. ಇದಕ್ಕೆ ಕಾರಣ ಪತಿ ಕುಡಿತದ ದಾಸನಾಗಿದ್ದ. ಈ ಹಿನ್ನೆಲೆಯಲ್ಲಿ ದಿನನಿತ್ಯದ ಜಗಳದಿಂದ ಬೇಸತ್ತಿದ್ದ ಪತ್ನಿ ಕಲೆದ ವಾರದ ಹಿಂದೆ ಮನೆ ತೊರೆದಿದ್ದಳು. ಆದರೆ ದುರ್ಗಮ್ಮ ದೊರಕಿರಲಿಲ್ಲ. ಇದರಿಂದ ಬೇಸತ್ತ ಪತಿ ತನ್ನ ಮೂವರೂ ಮಕ್ಕಳಿಗೆ ವಿಷ ಪ್ರಾಸನ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದ ಎನ್ನಲಾಗಿದೆ.