ಹೊನ್ನಾಳಿಯಲ್ಲಿ ಶಂಕಿತ ಉಗ್ರನ ಬಂಧನ: ನ್ಯಾಯಾಲಯಕ್ಕೆ ಹಾಜರು

ಗುರುವಾರ, 29 ಜನವರಿ 2015 (17:09 IST)
ದಾವಣಗೆರೆ: ಉಗ್ರನ ಬಂಧನಕ್ಕಾಗಿ ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದ ಇಲ್ಲಿನ ಜಿಲ್ಲಾ ಪೊಲೀಸರು ಶಂಕಿತ ಉಗ್ರನೋರ್ವನನ್ನು ಇಂದು ಬಂಧಿಸಿದ್ದು, ಜಿಲ್ಲೆಯ ಹೊನ್ನಾಳಿ ತಾಲೂಕು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. 
 
ಬಂಧಿತ ಶಂಕಿತ ಉಗ್ರನನ್ನು ಮೊಹಮ್ಮದ್ ತೆಚಲೂರ ಹುಸೇನ್ ಎಂದು ಹೇಳಲಾಗಿದ್ದು, ಅಸ್ಸಾಂ ಮೂಲದ ನಿವಾಸಿ ಎನ್ನಲಾಗಿದೆ. ಈತ ನಗರದಲ್ಲಿ ಲಾರಿ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಎಂದು ತಿಳಿದು ಬಂದಿದೆ. 
 
ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸರು, ಈ ಶಂಕಿತ ಉಗ್ರನ ಬಗ್ಗೆ ಅಸ್ಸಾಂ ಪೊಲೀಸರೇ ಮಾಹಿತಿ ನೀಡಿ ಆತ ಜಿಲ್ಲೆಯಲ್ಲಿ ಅಡಗಿರುವುದಾಗಿ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ನಮ್ಮ ತಂಡ ಶಂಕಿತ ಆರೋಪಿಯ ಬಂಧನಕ್ಕಾಗಿ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಆದರೆ ಇಂದು ಗೌಪ್ಯವಾಗಿ ಸಂಚರಿಸುತ್ತಿದ್ದ ನಮ್ಮ ತಂಡಕ್ಕೆ ಆತ ಸಿಕ್ಕಿಬಿದ್ದಿದ್ದು, ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ ಬಂಧಿತನನ್ನು ತಕ್ಷಣೆವೇ ಹೊನ್ನಾಳಿಯ ತಾಲೂಕು ಮಟ್ಟದ ನ್ಯಾಯಾಲಯಕ್ಕೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಯಿತು ಎಂದು ತಿಳಿಸಿದ್ದಾರೆ.   

ವೆಬ್ದುನಿಯಾವನ್ನು ಓದಿ