ಮೃತರನ್ನು ಮೀನಾಕ್ಷಮ್ಮ (48), ಮಕ್ಕಳಾದ ಯೋಗಶ್ರೀ(25), ಪದ್ಮಾ(23), ಸುಚಿತ್ರಾ(21), ಮಂಜೇಗೌಡ (14) ಎಂದು ಗುರುತಿಸಲಾಗಿದೆ.
ಇದರಿಂದ ತೀರ್ವ ನೊಂದಿದ್ದ ಯೋಗಶ್ರೀ ತವರಿಗೆ ಬಂದು ಎಲ್ಲ ವಿಷಯವನ್ನು ತಿಳಿಸಿದ್ದಾಳೆ. ವೃತ್ತಿಯಲ್ಲಿ ಶಿಕ್ಷಕರಾಗಿದ್ದ ಮೀನಾಕ್ಷಮ್ಮ ಅವರ ಪತಿ ಸಹ 2 ತಿಂಗಳ ಹಿಂದೆ ಮೃತ ಪಟ್ಟಿದ್ದರು. ಅದೇ ನೋವಿನಲ್ಲಿದ್ದ ಮೀನಾಕ್ಷಮ್ಮ ಕುಟುಂಬ ಯೋಗಶ್ರೀಗೆದುರಾದ ನೋವಿನಿಂದ ಮತ್ತಿಷ್ಟು ಆಘಾತಗೊಂಡಿದೆ. ಈ ಹಿನ್ನೆಲೆಯಲ್ಲಿ ಐವರೂ ಡೆತ್ನೋಟ್ ಬರೆದಿಟ್ಟು ಸಾಮೂಹಿಕವಾಗಿ ನೇಣಿಗೆ ಶರಣಾಗಿದ್ದಾರೆ.ಮಂಗಳವಾರ ಬೆಳಗ್ಗೆ ಗ್ರಾಮಸ್ಥರಿಗೆ ಈ ಘೋರ ದುರಂತದ ಮಾಹಿತಿ ಲಭಿಸಿದೆ.
ಮೀನಾಕ್ಷಮ್ಮ ಡೆತ್ನೋಟ್ನಲ್ಲಿ ತಮ್ಮ ಸಂಪೂರ್ಣ ಆಸ್ತಿಯನ್ನು ಶ್ರೀರಂಗಪಟ್ಟಣ ಬಳಿಯಿರುವ ಶ್ರೀ ಸಾಯಿಬಾಬಾ ಅನಾಥಾಶ್ರಮದ ಹೆಸರಿಗೆ ವರ್ಗಾಯಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ಜತೆಗೆ, ಎಲ್ಲರನ್ನು ಪತಿ ರಾಮೇಗೌಡ ಸಮಾಧಿ ಬಳಿ ಸಾಮೂಹಿಕ ಅಂತ್ಯಸಂಸ್ಕಾರ ಮಾಡಬೇಕೆಂದು ಮನವಿ ಮಾಡಿದ್ದರು.