ದೇಗುಲದಲ್ಲಿ ಪೂಜೆ ಮಾಡುವ ಅರ್ಚಕನಿಂದ ಅತ್ಯಾಚಾರ ಯತ್ನ

ಬುಧವಾರ, 20 ಆಗಸ್ಟ್ 2014 (11:33 IST)
ದೇಗುಲದಲ್ಲಿ ನಿತ್ಯ ದೇವರ ಪೂಜೆ, ಮನಸ್ಸಿನಲ್ಲಿ ನಿತ್ಯ ಕಾಮಾರಾಧನೆ. ಇದು ಮಹಾಬಲೇಶ್ವರ ಭಟ್ ಎಂಬ ಅರ್ಚಕನೊಬ್ಬನ ಕಾಮಪುರಾಣ. ಸಾಗರ ತಾಲೂಕಿನ ವ್ಯಾಘ್ರವಾಹಿನಿ ದುರ್ಗಾದೇವಿ ದೇಗುಲದ ಅರ್ಚಕ ತನ್ನ ಸ್ನೇಹಿತನ ಕುಟುಂಬದ ಜೊತೆ ಉತ್ತಮ ಸಂಬಂಧ ಹೊಂದಿದ್ದ. ಸ್ನೇಹಿತ ಮನೆಯಲ್ಲಿ ಇಲ್ಲದಾಗ ಮನೆಗೆ ಆಗಮಿಸಿ ಅವನ ಹೆಂಡತಿಯ ಜೊತೆ ಅಸಭ್ಯವಾಗಿ ವರ್ತಿಸಿ ಅವರ ಮೇಲೆ ಅತ್ಯಾಚಾರಕ್ಕೆ ಪ್ರಯತ್ನಿಸಿದ ಮತ್ತು ಮಹಿಳೆಯ ಟೀಶರ್ಟ್ ಹರಿದುಹಾಕಿ ತಬ್ಬಿಕೊಂಡ.

ಮಹಿಳೆ ಜೋರಾಗಿ ಕಿರುಚಿಕೊಂಡಾಗ, ಪಕ್ಕದ ಮನೆಯಲ್ಲಿದ್ದ ಮಹಿಳೆ ಏನಾಯಿತೆಂದು ವಿಚಾರಿಸಿಕೊಂಡು ಬರುವಷ್ಟರಲ್ಲಿ ಸ್ನೇಹಿತನ ಪತ್ನಿಯ ಮೇಲೆ ತನ್ನ ಹಿಡಿತ ಸಡಿಲಗೊಳಿಸಿದ ಅರ್ಚಕ ಪೊಲೀಸರಿಗೆ ದೂರು ನೀಡಿದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದ. 2 ದಿನಗಳ ನಂತರ ಪತ್ನಿ ಈ ವಿಷಯವನ್ನು ಪತ್ನಿಯಲ್ಲಿ ಹೇಳಿಕೊಂಡಾಗ ಮರ್ಯಾದೆಗೆ ಅಂಜಿ ಯಾರಿಗೂ ದೂರು ನೀಡಿರಲಿಲ್ಲ. ಕೆಲವು ದಿನಗಳ ನಂತರ ದೂರು ನೀಡಲು ಹೋದಾಗ ಪೊಲೀಸರು ನಿರ್ಲಕ್ಷ್ಯ ವಹಿಸಿದರು.

ರಾಜಿ ಸಂಧಾನ ಮಾಡುವಂತೆ ಸಿಪಿಐ ಸಲಹೆ ಮಾಡಿದ್ದರಿಂದ ಸಂಧಾನ ಮಾಡಿಕೊಂಡಿದ್ದರು.  ಆದರೆ ನಂತರ ಮಹಿಳೆಯ ತೇಜೋವಧೆ ಮಾಡಲು ಅರ್ಚಕ ಪ್ರಯತ್ನಿಸಿದ್ದರಿಂದ  ಪೊಲೀಸ್ ಮಹಾನಿರ್ದೇಶಕರ ಗಮನಕ್ಕೆ ಈ ವಿಷಯವನ್ನು ತಂದ ನಂತರ ಆರೋಪಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಈಗ ಅರ್ಚಕ ತಲೆತಪ್ಪಿಸಿಕೊಂಡಿದ್ದು, ಪೊಲೀಸರು ಹುಡುಕಾಡುತ್ತಿದ್ದಾರೆ. 

ವೆಬ್ದುನಿಯಾವನ್ನು ಓದಿ