ದೂರು ನೀಡಿರುವ ವಕೀಲರಲ್ಲಿ ಹರಿಶೇಖರ್ ಜೈನ್ ಸೇರಿದಂತೆ ಆರು ಮಂದಿ ದೂರು ದಾಖಲಿಸಿದ್ದರು. ದೇವ ಅಗ್ರೇಶ್ವರ್ ಮಹಾದೇವ್ ಅವರೇ ದೂರಿನ ಮುಖ್ಯ ಫಿರ್ಯಾದುದಾರರಾಗಿದ್ದು, ತಾಜ್ ಮಹಲ್ ಆಸ್ತಿಯ ಒಡೆಯರು ಅವರೇ ಆಗಿದ್ದಾರೆ ಎಂದು ಶಿವನ ಹೆಸರನ್ನು ಉಲ್ಲೇಖಿಸಿದ್ದರು. ಅಲ್ಲದೆ ತಾಜ್ ಮಹಲ್ ಸಂಬಂಧವಿರುವ ಎಲ್ಲಾ ಆರೋಪಗಳನ್ನು ಶಮನಗೊಳಿಸಬೇಕಿದೆ. ಜೊತೆಗೆ ಇಲ್ಲಿ ಪ್ರಸ್ತುತ ಮುಸ್ಲಿಂ ಸಮುದಾಯದವರು ಪ್ರಾರ್ಥನೆ ಸಲ್ಲಿಸುತ್ತಿದ್ದು, ಅವರನ್ನು ನಿಷೇಧಿಸಿ ಬಳಿಕ ಹಿಂದೂ ಧರ್ಮದವರಿಗೆ ಶಿವನನ್ನು ಪೂಜಿಸಲು ಅವಕಾಶ ನೀಡಬೇಕು ಎಂದು ದೂರಿನಲ್ಲಿ ತಿಳಿಸಿದ್ದರು.
ತಾಜ್ ಮಹಲ್ ಪ್ರಸ್ತುತ ಸರ್ಕಾರದ ಪುರಾತತ್ವ ಇಲಾಖೆ ಅಡಿಯಲ್ಲಿದೆ.
ಇಂತಹುದೇ ವಿವಾದಕ್ಕೆ ಕಾರಣವಾಗಿದ್ದ ಮತ್ತೊಂದು ಪ್ರಕರಣವಾದ ಅಯೋಧ್ಯೆಯು ರಾಮನ ಜನ್ಮಭೂಮಿ ಎಂಬ ಪ್ರಕರಣ ಇಂದಿಗೂ ಕೂಡ ಸುಪ್ರೀಂ ನ್ಯಾಯಾಲಯದಲ್ಲಿ ಇನ್ನೂ ಬಾಕಿ ಉಳಿದಿದೆ.