ಬಿಎಸ್‌ವೈ ಎಲ್ಲಿ ಬೇಕಾದ್ರೂ ಊಟ ಮಾಡ್ಲಿ, ದಲಿತರ ಮತಗಳು ಕಾಂಗ್ರೆಸ್‌ಗೆ

ಶುಕ್ರವಾರ, 19 ಮೇ 2017 (19:19 IST)
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ದಲಿತರ ಮನೆಯಲ್ಲಿ ಊಟ ಮಾಡಲಿ. ಅಥವಾ ಬೇರೆ ಕಡೆ ಊಟ ಮಾಡಲಿ. ದಲಿತರ ಮತಗಳು ಮಾತ್ರ ಕಾಂಗ್ರೆಸ್‌ಗೆ ಬರುತ್ತವೆ ಎಂದು ಸಮಾಜ ಕಲ್ಯಾಣ ಖಾತೆ ಸಚಿವ ಎಚ್.ಅಂಜನೇಯ್ ಹೇಳಿದ್ದಾರೆ.
 
ಬಿಜೆಪಿಯವರು ದಲಿತರ ಮನೆಯಲ್ಲಿ ಊಟ ಮಾಡಿದ್ದೇವೆ ಎನ್ನುವ ಹೊಸ ಪ್ರಯೋಗ ಮಾಡಲು ಹೊರಟಿದ್ದಾರೆ. ಆದರೆ, ಬಿಜೆಪಿ ನಾಯಕರ ಆಟ ನಡೆಯುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.
 
ಯಡಿಯೂರಪ್ಪನವರಿಗೆ ಅಸ್ಪಶ್ಯತೆ ಬಗ್ಗೆ ಕಾಳಜಿಯಿದ್ದರೇ ಹಾವೇರಿಗೆ ಭೇಟಿ ನೀಡಲಿ. ದಲಿತರ ಮನೆಯಲ್ಲಿ ಮದುವೆ ಕಾರ್ಯಕ್ರಮವಿದ್ದರೆ, ದಲಿತರ ಮದುವೆಗೆ ಬಂದವರು ಹೋಟೆಲ್‌, ಅಂಗಡಿಗಳಿಗೆ ಬರುತ್ತಾರೆ ಎನ್ನುವ ಕಾರಣಕ್ಕೆ ಹೋಟೆಲ್, ಅಂಗಡಿಗಳನ್ನು ಬಂದ್ ಮಾಡಲಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
 
ಬಿಎಸ್‌ವೈ ನೇತೃತ್ವದ ಬರ ಅಧ್ಯಯನ ತಂಡ ದಲಿತನ ಮನೆಯಲ್ಲಿ ಕುಳಿತು ಖಾಸಗಿ ಹೋಟೆಲ್ ಉಪಹಾರ ಸೇವಿಸಿರುವ ಬಗ್ಗೆ ವರದಿಗಳು ಬರುತ್ತಿವೆ. ಒಂದು ವೇಳೆ ನಿಜವಾಗಿದ್ದಲ್ಲಿ ಇದಕ್ಕಿಂತ ವಿಷಾದದ ಸಂಗತಿ ಬೇರೊಂದಿಲ್ಲ ಎಂದು ಸಚಿವ ಅಂಜನೇಯ್ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ