ಸಿಬಿಐ ತಂಡದಿಂದ ಪೊಲೀಸ್ ಆಯುಕ್ತರ ಭೇಟಿ

ಮಂಗಳವಾರ, 28 ಏಪ್ರಿಲ್ 2015 (09:37 IST)
ನಿಗೂಢವಾಗಿ ಸಾವನ್ನಪ್ಪಿದ ಐಎಎಸ್ ಅಧಿಕಾರಿ ಡಿಕೆ ರವಿ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಎಸ್‍ಪಿ ಬಾಲಾ ನೇತೃತ್ವದ ಸಿಬಿಐ ಅಧಿಕಾರಿಗಳ ತಂಡ ಸೋಮವಾರ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಮತ್ತು ನಗರ ಪೊಲೀಸ್ ಆಯುಕ್ತ ಎಂಎನ್ ರೆಡ್ಡಿ ಅವರನ್ನು ಭೇಟಿ ಮಾಡಿತು.

ತಮಗೆ ಉಳಿದುಕೊಳ್ಳಲು ಕ್ವಾಟ್ರಸ್, ಕಂಪ್ಯೂಟರ್, ವೈಫೈ ಹಾಗೂ ವಾಹನ ಮತ್ತು ತನಿಖೆಗೆ ಸಹಾಯ ಮಾಡಲು ಓರ್ವ ಅಧಿಕಾರಿಯನ್ನು ಒದಗಿಸಿಕೊಡುವಂತೆ ನಗರ ಪೊಲೀಸ್ ಆಯುಕ್ತರಲ್ಲಿ ತಂಡ ಕೇಳಿಕೊಂಡಿದೆ.
 
ಕಾನೂನು ರೀತಿಯಲ್ಲಿ ಸಿಬಿಐ ತಂಡಕ್ಕೆ ನೀಡಬಹುದಾದ ಎಲ್ಲಾ ಸೌಲಭ್ಯಗಳನ್ನು ನಗರ ಪೊಲೀಸ್ ಕಮಿಷನರ್ ಕೂಡಾ ತುರ್ತು ಆದೇಶ ಸಹ ನೀಡಿದ್ದಾರೆ. 
 
ಕಳೆದ ವಾರ ತನಿಖೆಯನ್ನು ಪ್ರಾರಂಭಿಸಿರುವ ತಂಡ ಇಲ್ಲಿಯವರೆಗೆ ರವಿಯವರ ಮಾವ ಹನುಮಂತರಾಯಪ್ಪ ಅವರನ್ನ ಭೇಟಿ ಮಾಡಿದ್ದು ಬಿಟ್ಟರೆ ತನಿಖೆಯಲ್ಲಿ ಇನ್ಯಾವ ಪ್ರಗತಿ ಕಂಡುಬಂದಿಲ್ಲ. 

ವೆಬ್ದುನಿಯಾವನ್ನು ಓದಿ