ವಿಚ್ಛೇದನ ಪ್ರಕರಣಗಳಲ್ಲಿ ಪತಿ ಪತ್ನಿಗೆ ಜೀವನಾಂಶ ನೀಡಬೇಕು ಎಂದು ಕೋರ್ಟ್ ತೀರ್ಪು ನೀಡುವುದು ಸಾಮಾನ್ಯ. ಆದರೆ ತನ್ನ ಪತಿಯ ವಿರುದ್ಧ ಸುಳ್ಳು ಆರೋಪ ಹೊರಿಸಿ ದೂರು ದಾಖಲಿಸಿದ ಪತ್ನಿಗೆ ಕೇರಳದ ಕೌಟುಂಬಿಕ ನ್ಯಾಯಾಲಯವೊಂದು ಪತಿಗೆ ಜೀವನಾಂಶ ನೀಡುವಂತೆ ಆದೇಶ ನೀಡಿದೆ.
ತನ್ನ ಪತಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಪತ್ನಿ ದೂರು ದಾಖಲಿಸಿದ್ದರಿಂದ ಪತಿ ಶಿವಪ್ರಸಾದ್ ತನ್ನ ಉದ್ಯೋಗವನ್ನು ಕಳೆದುಕೊಂಡಿದ್ದರು. ಹೀಗಾಗಿ ತಮ್ಮ ಪತ್ನಿ ನಿವ್ಯಾ ವಿರುದ್ಧ ಅವರು ಕುಟುಂಬ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಧೀಶ ಪಿ.ಡಿ. ಧರ್ಮರಾಜ್ ಲೈಂಗಿಕ ದೌರ್ಜನ್ಯ ಆರೋಪ ಸುಳ್ಳೆಂದು ಸಾಬೀತಾದ ಹಿನ್ನೆಲೆಯಲ್ಲಿ ಗಂಡನಿಗೆ ಮಾಸಿಕ 6,000 ಜೀವನಾಂಶ ನೀಡುವಂತೆ ಪತ್ನಿ ನಿವ್ಯಾರಿಗೆ ಆದೇಶ ನೀಡಿದ್ದಾರೆ.
ಶಿವಪ್ರಸಾದ್ ಮತ್ತು ನಿವ್ಯಾ 2011ರಲ್ಲಿ ಪ್ರೇಮವಿವಾಹವಾಗಿದ್ದರು.