ಘಟನೆ ವಿವರ: ಸ್ಯಾಂಡಲ್ವುಡ್ನ ಖ್ಯಾತ ನಟ, ರಾಜ್ಕುಮಾರ್ ಅವರ ಕಿರಿಯ ಪುತ್ರ ಪುನಿತ್ ರಾಜ್ಕುಮಾರ್ ಅಭಿನಯಿಸಿರುವ 'ರಣವಿಕ್ರಮ' ಚಿತ್ರವು ಇಂದು ತೆರೆ ಕಂಡಿದೆ. ಈ ಹಿನ್ನೆಲೆಯಲ್ಲಿ ಚಿತ್ರವನ್ನು ನಗರದ ಸಂತೋಷ್ ಚಿತ್ರಮಂದಿರದಲ್ಲಿಯೂ ಪ್ರದರ್ಶಿಸಲಾಗುತ್ತಿತ್ತು. ಸಿನಿಮಾ ಅರ್ಧ ಭಾಗ ಮುಗಿದ ಬಳಿಕ ಪ್ರೇಕ್ಷಕರಿಗೆ ವಿರಾಮ ನೀಡಲಾಗಿತ್ತು. ಈ ವೇಳೆ ಸುದೀಪ್ ಅಭಿನಯದ ರಂಗ ಚಿತ್ರದ ಟೀಸರ್ ತುಣುಕೊಂದನ್ನು ಪ್ರದರ್ಶಿಸಲಾಯಿತು. ಇದರಿಂದ ಕುಪಿತಗೊಂಡ ಪುನಿತ್ ಅಭಿಮಾನಿಗಳು(ಪ್ರೇಕ್ಷಕರು) ಚಿತ್ರಮಂದಿರದ ಎಲ್ಲಾ ಕಿಟಕಿ ಹಾಗೂ ಬಾಗಿಲುಗಳಿಗೆ ಅಳವಡಿಸಿದ್ದ ಎಲ್ಲಾ ಗಾಜುಗಳನ್ನು ಪುಡಿಪುಡಿ ಮಾಡುವ ಮೂಲಕ ತಮ್ಮ ಅಸಮಧಾನ ವ್ಯಕ್ತಪಡಿಸಿದರು. ಘಟನೆ ಪರಿಣಾಮ ಚಿತ್ರಮಂದಿರದಲ್ಲಿ ಕೆಲಕಾಲ ಬಿಗುವಿನ ವಾತಾರಣ ಮಿರ್ಮಾಣವಾಗಿತ್ತು.