ಮನೆಯಲ್ಲಿರುವ ಸಿಸಿಟಿವಿ ಕ್ಯಾಮೆರಾ ಧ್ವಂಸಗೊಳಿಸಿ ಶೋಕೇಸ್ ಗ್ಲಾಸ್ ಪುಡಿ ಪುಡಿ ಮಾಡಿದ್ದಾರೆ. ಕುವೆಂಪು ಬರೆದಿರುವ ನಾನಾ ಪುಸ್ತಕಗಳು ಚೆಲ್ಲಾಪಿಲ್ಲಿಯಾಗಿ ನೆಲದ ಮೇಲೆ ಬಿದ್ದಿತ್ತು. ತೀರ್ಥಹಳ್ಳಿ ಪೊಲೀಸರು ಮನೆಗೆ ಭೇಟಿ ನೀಡಿ ತನಿಖೆ ನಡೆಸಿದ್ದಾರೆ. ಕುವೆಂಪು ಅವರ ನಿವಾಸವನ್ನು ರಾಷ್ಟ್ರೀಯ ಸ್ಮಾರಕವಾಗಿ ಮಾಡಲಾಗಿತ್ತು. ಕುವೆಂಪು ನಿವಾಸದಲ್ಲಿ ಇತರೆ ಯಾವುದೇ ವಸ್ತುಗಳು ಇರಲಿಲ್ಲವೆಂದು ತಿಳಿದುಬಂದಿದೆ.