ರಾಷ್ಟ್ರಕವಿ ಕುವೆಂಪು ಪದ್ಮಭೂಷಣ, ಪದ್ಮವಿಭೂಷಣ ಪ್ರಶಸ್ತಿಗಳನ್ನು ಕದ್ದ ಕಳ್ಳರು

ಮಂಗಳವಾರ, 24 ನವೆಂಬರ್ 2015 (11:33 IST)
ಶಿವಮೊಗ್ಗದ ತೀರ್ಥಹಳ್ಳಿಯ ಕುಪ್ಪಳ್ಳಿಯಲ್ಲಿರುವ  ರಾಷ್ಟ್ರ ಕವಿ ಕುವೆಂಪು ನಿವಾಸ ಕವಿಶೈಲದಲ್ಲಿ ದಾಂಧಲೆ ನಡೆಸಿರುವ ಕಳ್ಳರು ಕುವೆಂಪು ಅವರ ಪದ್ಮಭೂಷಣ ಮತ್ತು ಪದ್ಮವಿಭೂಷಣ ಪ್ರಶಸ್ತಿಗಳನ್ನು ಕೂಡ  ಹೊತ್ತೊಯ್ದಿದ್ದಾರೆ.

 ಮನೆಯಲ್ಲಿರುವ ಸಿಸಿಟಿವಿ ಕ್ಯಾಮೆರಾ ಧ್ವಂಸಗೊಳಿಸಿ ಶೋಕೇಸ್ ಗ್ಲಾಸ್ ಪುಡಿ ಪುಡಿ ಮಾಡಿದ್ದಾರೆ.  ಕುವೆಂಪು ಬರೆದಿರುವ ನಾನಾ ಪುಸ್ತಕಗಳು ಚೆಲ್ಲಾಪಿಲ್ಲಿಯಾಗಿ ನೆಲದ ಮೇಲೆ ಬಿದ್ದಿತ್ತು. ತೀರ್ಥಹಳ್ಳಿ  ಪೊಲೀಸರು ಮನೆಗೆ ಭೇಟಿ ನೀಡಿ ತನಿಖೆ ನಡೆಸಿದ್ದಾರೆ. ಕುವೆಂಪು ಅವರ ನಿವಾಸವನ್ನು ರಾಷ್ಟ್ರೀಯ ಸ್ಮಾರಕವಾಗಿ ಮಾಡಲಾಗಿತ್ತು.  ಕುವೆಂಪು ನಿವಾಸದಲ್ಲಿ ಇತರೆ ಯಾವುದೇ ವಸ್ತುಗಳು ಇರಲಿಲ್ಲವೆಂದು ತಿಳಿದುಬಂದಿದೆ.

 ಕುವೆಂಪು ತಮ್ಮ ಬಾಲ್ಯವನ್ನು ಇದೇ ಮನೆಯಲ್ಲಿ ಕಳೆದಿದ್ದರು. ಕುವೆಂಪು ಅವರ ನೆನಪನ್ನು ಅಜರಾಮರವಾಗಿ ಉಳಿಸಲು ಅವರ ಮನೆಯನ್ನು ರಾಷ್ಟ್ರೀಯ ಸ್ಮಾರಕವಾಗಿ ನಿರ್ಮಿಸಲಾಗಿತ್ತು. 

ವೆಬ್ದುನಿಯಾವನ್ನು ಓದಿ