ಕೇರಳ ಮೂಲದ ಸುಭಾಷ್, ಮೋಹನ್, ನಾಗರಾಜ್ ಬಂಧಿತ ಆರೋಪಿಗಳು.
ಮೈಸೂರಿನ ಜಗನ್ಮೋಹನ್ ಅರಮನೆ ಬಳಿ ಇವರು ಹುಲಿ ಚರ್ಮ ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಪಡೆದು ಅವರನ್ನು ಬಂಧಿಸಿದ ಮೈಸೂರು ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಅದು ಹುಲಿ ಚರ್ಮವಲ್ಲ ನಾಯಿ ಚರ್ಮವೆಂದು ತಿಳಿದು ಬಂದಿದೆ. ನಾಯಿ ಚರ್ಮ ಸುಲಿದು ಅದಕ್ಕೆ ಬಣ್ಣ ಬಳಿದು ಜನರನ್ನು ವಂಚಿಸುತ್ತಿದ್ದುದ್ದನ್ನು ಆರೋಪಿಗಳು ಸಹ ಒಪ್ಪಿಕೊಂಡಿದ್ದಾರೆ.