ಕರವೇ ಬಣದಿಂದ ಟೋಲ್ ಕೌಂಟರ್ ಮೇಲೆ ದಾಳಿ : ಗಾಜುಗಳು ಪುಡಿ, ಪುಡಿ

ಬುಧವಾರ, 7 ಮೇ 2014 (12:16 IST)
ಏರ್‌ಪೋರ್ಟ್ ರಸ್ತೆಯಲ್ಲಿ ಟೋಲ್ ದರ ಹೆಚ್ಚಳ ವಿರೋಧಿಸಿ ಕರವೇ ಪ್ರವೀಣ್ ಶೆಟ್ಟಿ ಬಣದ ಕಾರ್ಯಕರ್ತರು ಟೋಲ್ ಕೌಂಟರ್ ಮೇಲೆ ದಾಳಿ ಮಾಡಿ ಗಾಜುಗಳನ್ನು ಪುಡಿ, ಪುಡಿ ಮಾಡಿದ ಘಟನೆ ನಡೆದಿದೆ. ಟೋಲ್ ಎದುರುಭಾಗದಲ್ಲಿ ಬಿಗಿ ಪೊಲೀಸ್ ಭದ್ರತೆ ನಡುವೆಯೂ ಪ್ರತಿಭಟನೆ ಮುಂದುವರಿದಿದ್ದು, ಸಾದಹಳ್ಳಿ ಗೇಟ್ ಬಳಿ ಬಿಗಿ ಭದ್ರತೆ ವಿಧಿಸಲಾಗಿದೆ.

ಕರವೇ ಧರಣಿ ಹಿನ್ನೆಲೆಯಲ್ಲಿ ಹೆಚ್ಚುವರಿ ಪೊಲೀಸರನ್ನು ನೇಮಿಸಲಾಗಿದೆ. ಈಶಾನ್ಯ ವಿಭಾಗದ ಡಿಸಿಪಿ ಸುರೇಶ್ ನೇತೃತ್ವದಲ್ಲಿ ಬಿಗಿ ಭದ್ರತೆ ನಿಯೋಜಿಸಲಾಗಿದೆ. 6 ಎಸಿಪಿಗಳು, 18 ಇನ್ಸ್‌ಪೆಕ್ಟರ್‌ಗಳು ಮತ್ತು 400 ಸಿಬ್ಬಂದಿಯನ್ನು ಇಲ್ಲಿ ನಿಯೋಜಿಸಲಾಗಿದೆ.

ಟೋಲ್ ದರವನ್ನು ಕಡಿಮೆ ಮಾಡಿ ಎಂದು ನಾವು ಕೇಳ್ತಿಲ್ಲ. ಯಾವುದೇ ಕಾರಣಕ್ಕೂ ನಮಗೆ ಟೋಲ್ ಬೇಡ ಎಂದು ಕರವೇ ಕಾರ್ಯಕರ್ತರೊಬ್ಬರು ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ