ಈತನಿಗೆ 2 ಎಕರೆ ಜಮೀನಿದ್ದು, ಕಬ್ಬನ್ನು ಬೆಳೆದಿದ್ದ. ಕಬ್ಬಿನ ಬೆಳೆಗಾಗಿ ಬ್ಯಾಂಕ್ನಲ್ಲಿ 25 ಸಾವಿರ ಸೇರಿದಂತೆ ಒಟ್ಟು 2.5 ಲಕ್ಷ ಕೈ ಸಾಲ ಮಾಡಿಕೊಂಡಿದ್ದ. ಇತ್ತೀಚೆಗೆ ರೇಣುಕಾ ಸಕ್ಕರೆ ಕಾರ್ಖಾನೆಗೆ ಕಬ್ಬನ್ನೂ ಕೂಡ ಪೂರೈಸಿದ್ದ. ಈ ಹಿನ್ನೆಲೆಯಲ್ಲಿ ಕಾರ್ಖಾನೆಯು ರೈತ ನರಿ ಅವರಿಗೆ 1 ಲಕ್ಷಕ್ಕೂ ಅಧಿಕ ಹಣವನ್ನು ಪಾವತಿಸಬೇಕಿತ್ತು. ಆದರೆ ಕಾರ್ಖಾನೆ ಹಣ ಹಿಂದಿರುಗಿಸಿಲ್ಲ ಎಂದು ಮನನೊಂದ ರೈತ ಇಂದು ನೇಣಿ ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.