ಕೋಟೆ ಮಾರಮ್ಮ ದೇಗುಲದ ಮೇಲೆ ಮರ ಉರುಳಿ ಇಬ್ಬರ ಸಾವು

ಮಂಗಳವಾರ, 16 ಸೆಪ್ಟಂಬರ್ 2014 (18:43 IST)
ಮೈಸೂರಿನಲ್ಲಿ ಕೋಟೆಮಾರಮ್ಮ ದೇಗುಲದ ಮೇಲೆ ಮರ ಉರುಳಿಬಿದ್ದ ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಸುಶೀಲಮ್ಮ (60) ಮತ್ತು ಶೈಲಜಾ ಎಂಬ ಇನ್ನೊಬ್ಬ ಮಹಿಳೆ ಸಾವನ್ನಪ್ಪಿದ್ದಾರೆ.

ಈ ಸಂದರ್ಭದಲ್ಲಿ ಅಗ್ನಿಶಾಮಕ ಸಿಬ್ಬಂದಿ ಶ್ರೀಕಂಠ ಅರಸು ಅವರಿಗೆ ಹಾವು ಕಚ್ಚಿ ಅವರನ್ನು ಆಸ್ಪತ್ರೆಗೆ ಸೇರಿಸಿದ ಘಟನೆಯೂ ನಡೆದಿದೆ. 
 
ಮೈಸೂರು ಅರಮನೆಗೆ ಹೊಂದಿಕೊಂಡಿರುವ ಕೋಟೆ ಮಾರಮ್ಮ ದೇವಸ್ಥಾನದ ಬಳಿಯಿದ್ದ ಅರಳಿಮರ ಇದ್ದಕ್ಕಿದ್ದಂತೆ ದೇಗುಲದ ಮೇಲೆ  ಉರುಳಿಬಿತ್ತು.ಮರದಡಿ ಸಿಕ್ಕಿಬಿದ್ದ ನಾಲ್ಕು ಜನರನ್ನು ದಾರಿಹೋಕರು ರಕ್ಷಿಸಿದ್ದಾರೆ..ದೇವಸ್ಥಾನದ ಒಳಗೆ ಮೂವರು ಸಿಲುಕಿದ್ದಾರೆಂದು ಶಂಕಿಸಲಾಗಿದೆ. ಗಾಯಾಳುಗಳನ್ನು ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರವಾಗಿ ಗಾಯಗೊಂಡಿದ್ದ ಸುಶೀಲಮ್ಮ ಮತ್ತು ಶೈಲಜಾ ಸಾವನ್ನಪ್ಪಿದರು. ಈ ನಡುವೆ ಮೃತ ಕುಟುಂಬಗಳಿಗೆ ಒಂದೂವರೆ ಲಕ್ಷ ಪರಿಹಾರವನ್ನು ಸರ್ಕಾರ ಘೋಷಣೆ ಮಾಡಿದೆ. 

ವೆಬ್ದುನಿಯಾವನ್ನು ಓದಿ