ಮೈಸೂರು ಅರಮನೆಗೆ ಹೊಂದಿಕೊಂಡಿರುವ ಕೋಟೆ ಮಾರಮ್ಮ ದೇವಸ್ಥಾನದ ಬಳಿಯಿದ್ದ ಅರಳಿಮರ ಇದ್ದಕ್ಕಿದ್ದಂತೆ ದೇಗುಲದ ಮೇಲೆ ಉರುಳಿಬಿತ್ತು.ಮರದಡಿ ಸಿಕ್ಕಿಬಿದ್ದ ನಾಲ್ಕು ಜನರನ್ನು ದಾರಿಹೋಕರು ರಕ್ಷಿಸಿದ್ದಾರೆ..ದೇವಸ್ಥಾನದ ಒಳಗೆ ಮೂವರು ಸಿಲುಕಿದ್ದಾರೆಂದು ಶಂಕಿಸಲಾಗಿದೆ. ಗಾಯಾಳುಗಳನ್ನು ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರವಾಗಿ ಗಾಯಗೊಂಡಿದ್ದ ಸುಶೀಲಮ್ಮ ಮತ್ತು ಶೈಲಜಾ ಸಾವನ್ನಪ್ಪಿದರು. ಈ ನಡುವೆ ಮೃತ ಕುಟುಂಬಗಳಿಗೆ ಒಂದೂವರೆ ಲಕ್ಷ ಪರಿಹಾರವನ್ನು ಸರ್ಕಾರ ಘೋಷಣೆ ಮಾಡಿದೆ.