ಹೊನ್ನಾವರದಲ್ಲಿ ಕಾಡುಹಂದಿಗಳು ಗ್ರಾಮಕ್ಕೆ ದಾಳಿ: ಇಬ್ಬರಿಗೆ ಗಾಯ

ಸೋಮವಾರ, 18 ಆಗಸ್ಟ್ 2014 (11:33 IST)
ಉತ್ತರಕನ್ನಡ ಜಿಲ್ಲೆ ಹೊನ್ನಾವರದ ಗೇರುಸೊಪ್ಪ ಗ್ರಾಮಕ್ಕೆ ನುಗ್ಗಿದ ಕಾಡುಹಂದಿಗಳು ಇಬ್ಬರ ಮೇಲೆ ದಾಳಿ ಮಾಡಿ ಗಾಯಗೊಳಿಸಿವೆ. ಪಾಂಡುರಂಗ ಮತ್ತು ಗೋಪಾಲ್ ನಾಯಕ್ ಎಂಬವರ ಮೇಲೆ ಕಾಡುಹಂದಿಗಳು ಎರಗಿದ್ದರಿಂದ ರಕ್ತದ ಮಡುವಿನಿಲ್ಲಿ ಬಿದ್ದಿದ್ದ ಅವರಿಬ್ಬರನ್ನು ಜನರು ಆಸ್ಪತ್ರೆಗೆ ಸಾಗಿಸಿ ಜೀವವುಳಿಸಿದ್ದಾರೆ.

ಗ್ರಾಮಸ್ಥರು ಹೇಳುವ ಪ್ರಕಾರ ಸುಮಾರು 10ಕ್ಕೂ ಹೆಚ್ಚು ಕಾಡುಹಂದಿಗಳು ಗ್ರಾಮದ ತೋಟಗಳಿಗೆ ನುಗ್ಗಿವೆ. ಗ್ರಾಮಕ್ಕೆ ಅರಣ್ಯಾಧಿಕಾರಿಕಾರಿಗಳು ದೌಡಾಯಿಸಿದ್ದಾರೆ.

ಪೊಲೀಸರು ಕೋರ್ಟ್ ಬಳಿ ಬಿಗಿ ಭದ್ರತೆ ನಿಯೋಜಿಸಿದ್ದಾರೆ. ಗಾಯಾಳುಗಳನ್ನು ಹೊನ್ನಾವರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. 

ವೆಬ್ದುನಿಯಾವನ್ನು ಓದಿ