ಮೃತ ಸಹೋದರರನ್ನು ನಾರಾಯಣಪ್ಪ(45) ಹಾಗೂ ರಾಮಚಂದ್ರಪ್ಪ(48) ಎನ್ನಲಾಗಿದ್ದು, ಸಹೋದರಿ ಈಶ್ವರಮ್ಮ ಎಂಬುವವರು ಹೋಗೆದಿದ್ದ ಬಟ್ಟೆಗಳನ್ನು ಒಣಗಿಸುವ ಸುವಾಗಿ ಆರಿಸಲು ಮುಂದಾಗಿದ್ದರು. ಈ ವೇಳೆ ತಮ್ಮ ಸಹೋದರಿ ವಿದ್ಯುತ್ ಅವಘಡಕ್ಕೆ ಸಿಲುಕಿದ್ದುದನ್ನು ಕಂಡ ಸಹೋದರರಿಬ್ಬರು ಆಕೆಯನ್ನು ರಕ್ಷಿಸಲು ಯತ್ನಿಸಿದ್ದಾರೆ. ಆದರೆ ದುರಾದೃಷ್ಟ ಎಂಬಂತೆ ಆಕೆ ಸುರಕ್ಷಿತವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಆದರೆ ಅಲ್ಪ-ಸ್ವಲ್ಪ ಗಾಯಗಳಾಗಿದ್ದು, ಆಕೆಯನ್ನು ಇಲ್ಲಿನ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ರಕ್ಷಿಸಲು ಧಾವಿಸಿದ ಇಬ್ಬರು ಸಹೋದರರು ವಿದ್ಯುತ್ ಅವಘಡದಲ್ಲಿ ಸಿಲುಕಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.