ಆದರೆ ಹಣ ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ಇಬ್ಬರ ನಡುವೆ ಜಗಳವಾಗಿತ್ತು. ಜಯಂತಿ ಪವಾರ್ ಅವರು ಈ ಕುರಿತು ನಾಗರತ್ನಮ್ಮ ವಿರುದ್ಧ ಕಿರುಕುಳದ ದೂರು ನೀಡಿದ್ದರು. ಈ ಸಂಬಂಧ ಲಿಂಗಪ್ಪ ಅವರು ನಾಗರತ್ನಮ್ಮ ಮತ್ತು ಜಯಂತಿ ಪವಾರ್ ಅವರನ್ನು ಠಾಣೆಗೆ ಕರೆಸಿಕೊಂಡು ವಿಚಾರಣೆ ನಡೆಸುತ್ತಿದ್ದಾಗ ಇನ್ನೊಬ್ಬರು ಎಸ್ಐ ಗಣೇಶ್ ಅಲ್ಲಿಗೆ ಆಗಮಿಸಿ ನಿಮ್ಮನ್ನು ಠಾಣೆಗೆ ಕರೆಸಿದ್ದು ಯಾರೆಂದು ಪ್ರಶ್ನಿಸಿದ ನಂತರ ಗಣೇಶ್ ಮತ್ತು ಲಿಂಗಪ್ಪ ಅವರ ನಡುವೆ ಮಾತಿನ ಚಕಮಕಿ ನಡೆದು ಕೈಕೈ ಮಿಲಾಯಿಸಿ ಎಳೆದಾಡಿದರು.