ಎಟಿಎಂಗೆ ಹಣ ತುಂಬಿಸಲು ಬಂದಿದ್ದ ವಾಹನ ಅಪಹರಣ ?!

ಬುಧವಾರ, 1 ಏಪ್ರಿಲ್ 2015 (11:16 IST)
ಎಟಿಎಂವೊಂದಕ್ಕೆ ಹಣ ತುಂಬಿಸಲು ಬಂದಿದ್ದ ವಾಹನವೊಂದನ್ನು ಅಪಹರಣ ಮಾಡಿರುವ ಘಟನೆ ನಗರದ ಮೈಸೂರು ರಸ್ತೆಯ ನಗರದ ಫ್ಲೈಓವರ್‌ವೊಂದರ ಬಳಿ ಇಂದು ನಡೆದಿದೆ.
 
ಜೇಮ್ಸ್‌ ಎಂಬ ಹೆಸರಿನ ವ್ಯಕ್ತಿ ಅಪಹರಣಕ್ಕೊಳಗಾದ ವಾಹನದ ಚಾಲಕನಾಗಿದ್ದು, ಆತನೇ ಈ ಕೃತ್ಯ ಎಸಗಿದ್ದಾನೆ ಎಂದು ಹೇಳಲಾಗುತ್ತಿದೆ. ವಾಹನವು ಬ್ರಿಂಕ್ಸ್‌ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ಗೆ ಸೇರಿದ ವಾಹನವಾಗಿದ್ದು, ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾ ಎಟಿಎಂಗೆ ಹಣ ತುಂಬಿಸಲು ತೆರಳುತ್ತಿತ್ತು ಎಂಬ ಮಾಹಿತಿ ತಿಳಿದು ಬಂದಿದೆ. 
 
ಇನ್ನು ಈ ಸಂಬಂಧ ಎಟಿಎಂವೊಂದರಲ್ಲಿ ಭದ್ರತಾ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಗನ್‌ಮ್ಯಾನ್‌ ತಮ್ಮಯ್ಯ ಅವರು ನಗರದ ಕೆ.ಆರ್‌.ಮಾರುಕಟ್ಟೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 
 

ವೆಬ್ದುನಿಯಾವನ್ನು ಓದಿ