ಲೋಕಾಯುಕ್ತರಾಗಿ ನ್ಯಾ. ವಿಕ್ರಮ್ ಜಿತ್ ಸೇನ್ ನೇಮಕ ಸಾಧ್ಯತೆ

ಸೋಮವಾರ, 4 ಜನವರಿ 2016 (19:14 IST)
ಲೋಕಾಯುಕ್ತ ನೇಮಕ ಕುರಿತು ಕುಮಾರಕೃಪಾ ಗೆಸ್ಟ್‌ ಹೌಸ್‌ನಲ್ಲಿ ಸಿಎಂ ನೇತೃತ್ವದಲ್ಲಿ ಸಭೆ ನಡೆದಿದ್ದು, ನಾನು ಮತ್ತು ಈಶ್ವರಪ್ಪ ಇಬ್ಬರೂ ಸೇರಿ ನ್ಯಾ. ವಿಕ್ರಮ್ ಜಿತ್  ಸೇನ್ ಹೆಸರನ್ನು ಸೂಚಿಸಿದ್ದಾಗಿ ಜಗದೀಶ್ ಶೆಟ್ಟರ್ ಸಭೆ ಬಳಿಕ ಹೇಳಿದರು.

ಹೈಕೋರ್ಟ್ ಸಿಜೆ ಕೂಡ ವಿಕ್ರಂಜಿತ್ ಹೆಸರನ್ನು ಸೂಚಿಸಿದ್ದಾರಂದು ಶೆಟ್ಟರ್ ಹೇಳಿದರು.   ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ನ್ಯಾ. ಎಸ್. ಆರ್. ನಾಯಕ್ ಹೆಸರನ್ನು ಪ್ರಸ್ತಾಪಿಸಿದರು. ಸಭೆಯಲ್ಲಿ ಈ ಕುರಿತು ಚರ್ಚೆಯಾಗಿದೆ ಎಂದು ಶೆಟ್ಟರ್ ಹೇಳಿದರು.

 ರಾಜ್ಯಸರ್ಕಾರಕ್ಕೂ ಕೂಡ ವಿಕ್ರಂಜಿತ್ ಬಗ್ಗೆ ಒಲವಿದೆ. ಸಿಎಂ ಸಿದ್ದರಾಮಯ್ಯ ಅಂತಿಮ ನಿರ್ಧಾರ ಕೈಗೊಳ್ಳಲಿದ್ದು,  ನಾಳೆ ಸರ್ಕಾರದಿಂದ ರಾಜ್ಯಪಾಲರಿಗೆ ಲೋಕಾಯುಕ್ತರ ಹೆಸರನ್ನು ಶಿಫಾರಸು ಮಾಡುವ ಸಾಧ್ಯತೆಯಿದೆ. ವಿಕ್ರಂಜಿತ್ ಅವರು ಲೋಕಾಯುಕ್ತರಾಗಿ ನೇಮಕವಾಗುವುದು ಬಹುಮಟ್ಟಿಗೆ ಖಚಿತವೆಂದು ಹೇಳಲಾಗುತ್ತಿದೆ. 

ವೆಬ್ದುನಿಯಾವನ್ನು ಓದಿ