ರಸ್ತೆಯಲ್ಲಿ ಹಸುಗಳನ್ನು ಕಟ್ಟಿಹಾಕಿ ಗ್ರಾಮಸ್ಥರ ವಿಭಿನ್ನ ಪ್ರತಿಭಟನೆ

ಬುಧವಾರ, 10 ಸೆಪ್ಟಂಬರ್ 2014 (16:10 IST)
ಬೆಂಗಳೂರಿನ ಕೆ. ನಾರಾಯಣಪುರದಲ್ಲಿ ಮುಖ್ಯರಸ್ತೆಯಲ್ಲಿ ಒಂದು ವಿಭಿನ್ನ ರೀತಿಯಲ್ಲಿ ರಸ್ತೆ ತಡೆ ನಡೆಯಿತು.  ರಸ್ತೆಯ ಮೇಲೆ ಹಸುಗಳನ್ನು ಕಟ್ಟಿಹಾಕಿ ರಸ್ತೆ ಸಂಚಾರವನ್ನು ಗ್ರಾಮಸ್ಥರು ಬಂದ್ ಮಾಡಿದರು.

ಪಶುಚಿಕಿತ್ಸಾಲಯವನ್ನು ಸ್ಥಳಾಂತರಿಸುವ ನಿರ್ದಾರವನ್ನು ವಿರೋಧಿಸಿ ಗ್ರಾಮಸ್ಥರು ವೈದ್ಯಾಧಿಕಾರಿಗಳನ್ನು ಕೂಡಿ ಹಾಕಿದ ಘಟನೆ ಕೂಡ ನಡೆಯಿತು.ರಸ್ತೆ ಮಧ್ಯೆ ಎತ್ತಿನಗಾಡಿಗಳನ್ನು ಅಡ್ಡಲಾಗಿ ನಿಲ್ಲಿಸಿ ಕೂಡ ಪ್ರತಿಭಟನೆ ನಡೆಸಿದರು.

 ಈ ಪಶುಚಿಕಿತ್ಸಾಲಯವನ್ನು ದೊಡ್ಡಬಳ್ಳಾಪುರಕ್ಕೆ ಸ್ಥಳಾಂತರ ಮಾಡುವುದರ ವಿರುದ್ಧ ಗ್ರಾಮಸ್ಥರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. 

ವೆಬ್ದುನಿಯಾವನ್ನು ಓದಿ