ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಪ್ಪು ಜಯಂತಿಯನ್ನು ಕಾಂಗ್ರೆಸ್ ವೋಟ್ ಬ್ಯಾಂಕಿಗಾಗಿ ಬಳಸಿಕೊಳ್ಳುತ್ತಿರುವುದು ವಿಪರ್ಯಾಸದ ಸಂಗತಿ. ಟಿಪ್ಪು ಇತಿಹಾಸವನ್ನು ತೆರೆದು ನೋಡಿದ್ರೆ ಆತನ ಚರಿತ್ರೆ ಸರಕಾರಕ್ಕೆ ಗೊತ್ತಾಗುತ್ತೆ ಎಂದರು.
ಟಿಪ್ಪು ಒಬ್ಬ ಧರ್ಮಾಂಧನಾಗಿದ್ದು, ಆತನಿಂದ ಸಾಕಷ್ಟು ಜನ ದಬ್ಬಾಳಿಕೆ ಹಾಗೂ ಅತ್ಯಾಚರಕ್ಕೊಳಗಾಗಿದ್ದಾರೆ ಎಂದು ಆರೋಪಿಸಿದರು. ಟಿಪ್ಪು ಜಯಂತಿ ಯಾವ ಪುರುಷಾರ್ಥಕ್ಕೆ ಆಚರಿಸಬೇಕು ಎನ್ನುವುದನ್ನು ಸಾಬೀತುಪಡಿಸಲಿ. ಟಿಪ್ಪು ಜಯಂತಿ ಬದಲಿಗೆ ಅಬ್ದುಲ್ ಕಲಾಂ ಜಯಂತಿಯನ್ನು ಆಚರಿಸಿದ್ರೆ ಅದನ್ನು ಸ್ವಾಗತಿಸುತ್ತೇವೆ ಎಂದರು.