ನನ್ನನ್ನು ಆಶೀರ್ವದಿಸಿದಂತೆ ಕಾಂಗ್ರೆಸ್ ಪಕ್ಷವನ್ನು ಆಶೀರ್ವದಿಸಿ: ಅಂಬರೀಷ್

ಶನಿವಾರ, 6 ಫೆಬ್ರವರಿ 2016 (15:12 IST)
ನಾನು ಸಾಕಷ್ಟು ರಾಜಕಾರಣಿಗಳನ್ನು ನೋಡಿದ್ದೇನೆ ನಾನೇನು ದೊಡ್ಡ ರಾಜಕಾರಣಿಯಲ್ಲ. ಹಿರಿಯ ರಾಜಕಾರಣಿಗಳನ್ನು ನೋಡಿ ರಾಜಕೀಯ ಕಲಿತಿದ್ದೇನೆ. ನನಗೆ ನಟನಾಗಿ ಆಶೀರ್ವದಿಸಿದ್ದೀರಿ, ಕಾಂಗ್ರೆಸ್ ಪಕ್ಷಕ್ಕೂ ಆಶೀರ್ವದಿಸಿ ಎಂದು ವಸತಿ ಖಾತೆ ಸಚಿವ ಅಂಬರೀಷ್ ಹೇಳಿದ್ದಾರೆ. 
 
ಮೈಸೂರಿನಲ್ಲಿ ನಡೆಯುತ್ತಿರುವ ಬೃಹತ್ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅಂಬರೀಷ್, ಇಂತಹ  ಸರಕಾರವನ್ನು ನಾನು ಯಾವತ್ತೂ ನೋಡಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೊಗಳಿದರು.
 
ಕಾಂಗ್ರೆಸ್ ಪಕ್ಷ ಉಳಿದರೆ ನಾವೆಲ್ಲಾ ಉಳಿಯುತ್ತೇವೆ. ಕಾಂಗ್ರೆಸ್ ಪಕ್ಷ ಇಲ್ಲವೆಂದಾದಲ್ಲಿ ನಾವು ಕಾಣೆಯಾಗುತ್ತೇವೆ. ಮುಂದಿನ ಚುನಾವಣೆಯ ರೂಪರೇಷೆಗಳನ್ನು ಸಿದ್ದಪಡಿಸಲು ಮೈಸೂರು ಸಮಾವೇಶ ಆಯೋಜಿಸಲಾಗಿದೆ ಎಂದರು.
 
ಕಾಂಗ್ರೆಸ್ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಒಂದಾಗಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಪ್ರಯತ್ನಿಸಬೇಕು ಎಂದು ಮನವಿ ಮಾಡಿದರು.
 
ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರಕಾರ ಭ್ರಷ್ಟಾಚಾರರಹಿತ ಸರಕಾರವಾಗಿದೆ ಹಿಂದಿನ ಬಿಜೆಪಿ ಸರಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿತ್ತು ಎಂದು ವಸತಿ ಖಾತೆ ಸಚಿವ ಅಂಬರೀಷ್ ವಾಗ್ದಾಳಿ ನಡೆಸಿದರು.  

ವೆಬ್ದುನಿಯಾವನ್ನು ಓದಿ