ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಯಾವ ಜಯಂತಿಗೂ ಸರಕಾರಿ ರಜೆ ನೀಡಿಲ್ಲ. ಆದರೆ, ಹಿಂದೆ ನೀಡಲಾಗಿರುವ ರಜೆಗಳನ್ನು ರದ್ದು ಮಾಡಿದರೆ ವಿಲನ್ಗಳಾಗ್ತೀವಿ ಎಂದು ಹೇಳಿದರು.
ಅಧಿಕಾರ ಇಲ್ಲದಿದ್ದಾಗ ಕೆಲವರು ಟಿಪ್ಪು ವೇಷ ಧರಿಸಿ ಪೋಸ್ ಕೊಟ್ಟಿದ್ದರು. ಆದರೆ, ಅವರೆ ಇದೀಗ ಟಿಪ್ಪು ಸುಲ್ತಾನ್ ಮಂತಾಧ ಎನ್ನುತ್ತಿದ್ದಾರೆ. ಟಿಪ್ಪು ಮಂತಾಧನಲ್ಲ. ಅವರನ್ನು ಮಂತಾಂಧ ಎನ್ನುವವರು ನಿಜವಾದ ಮಂತಾಧರು ಎಂದು ಪರೋಕ್ಷವಾಗಿ ಬಿಜೆಪಿ ನಾಯಕರು ವಿರುದ್ಧ ವಾಗ್ದಾಳಿ ನಡೆಸಿದರು.