ನಾವು ಹಿಂದೂತ್ವದ ಹೆಸರಿನಲ್ಲಿ ಸಮಾಜ ಒಡೆಯುವ ದುಷ್ಟಶಕ್ತಿಗಳ ವಿರೋಧಿಗಳು: ಸಿಎಂ ಸಿದ್ದರಾಮಯ್ಯ

ಗುರುವಾರ, 17 ನವೆಂಬರ್ 2016 (14:56 IST)
ನಾವು ಹಿಂದೂ ಧರ್ಮ ವಿರೋಧಿಯಲ್ಲ. ಬದಲಾಗಿ ಹಿಂದೂತ್ವದ ಹೆಸರಿನಲ್ಲಿ ಸಮಾಜ ಒಡೆಯುವ ಕೃತ್ಯ ಎಸಗುತ್ತಿರುವವರ ವಿರೋಧಿಗಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. 
 
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಯಾವ ಜಯಂತಿಗೂ ಸರಕಾರಿ ರಜೆ ನೀಡಿಲ್ಲ. ಆದರೆ, ಹಿಂದೆ ನೀಡಲಾಗಿರುವ ರಜೆಗಳನ್ನು ರದ್ದು ಮಾಡಿದರೆ ವಿಲನ್‌ಗಳಾಗ್ತೀವಿ ಎಂದು ಹೇಳಿದರು.
 
ಅಧಿಕಾರ ಇಲ್ಲದಿದ್ದಾಗ ಕೆಲವರು ಟಿಪ್ಪು ವೇಷ ಧರಿಸಿ ಪೋಸ್ ಕೊಟ್ಟಿದ್ದರು. ಆದರೆ, ಅವರೆ ಇದೀಗ ಟಿಪ್ಪು ಸುಲ್ತಾನ್ ಮಂತಾಧ ಎನ್ನುತ್ತಿದ್ದಾರೆ. ಟಿಪ್ಪು ಮಂತಾಧನಲ್ಲ. ಅವರನ್ನು ಮಂತಾಂಧ ಎನ್ನುವವರು ನಿಜವಾದ ಮಂತಾಧರು ಎಂದು ಪರೋಕ್ಷವಾಗಿ ಬಿಜೆಪಿ ನಾಯಕರು ವಿರುದ್ಧ ವಾಗ್ದಾಳಿ ನಡೆಸಿದರು. 
 
ಶಿಕ್ಷಣ ಪಡೆದುಕೊಂಡ ನಾವು ಜಾತಿ ವ್ಯವಸ್ಥೆಯಿಂದ ದೂರವಾಗಬೇಕಿತ್ತು. ಆದರೆ, ಸಮಾಜದಲ್ಲಿ ಜಾತಿ ವ್ಯವಸ್ಥೆ ಕೊಳೆತು ನಾರುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ