ಶಾಸಕರ ಭವನದಲ್ಲಿ ತುರ್ತುಸುದ್ದಿಗೋಷ್ಠಿ ನಡೆಸಿದ ಸೊಗಡು ಶಿವಣ್ಣ, ಜಿಲ್ಲಾವಾರು ಪ್ರವಾಸ ಮಾಡಿ ನೊಂದವರ ಹೇಳಿಕೆಗಳನ್ನು ಪಡೆದು ವರದಿ ತಯಾರಿಸಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ರವಾನಿಸಲಾಗುವುದು.ಮಾರ್ಚ್ 15ರೊಳಗೆ ಸಮಸ್ಯೆಗಳನ್ನು ಪರಿಹರಿಸದಿದ್ದಲ್ಲಿ ಅಮಿತ್ ಶಾ ಮೊರೆಹೋಗುತ್ತೇವೆ ಎಂದು ತಿಳಿಸಿದ್ದಾರೆ.
ಮತ್ತೊಬ್ಬ ಬಿಜೆಪಿ ಮುಖಂಡ ಭಾನುಪ್ರಕಾಶ್ ಮಾತನಾಡಿ, ಬಿಎಸ್ವೈ ನಿರ್ಧಾರ ನೋವು ತಂದಿದೆ. ನಮ್ಮ ಅಹವಾಲುಗಳನ್ನು ಕೇಳಲು ಸಿದ್ದರಿಲ್ಲ. ಕಳೆದ ಹಲವು ವರ್ಷಗಳಿಂದ ಜಿಲ್ಲಾಧ್ಯಕ್ಷರಾಗಿ ದುಡಿದವರಿಗೆ ಗೌರವ ದೊರೆಯುತ್ತಿಲ್ಲ. ಯಡಿಯೂರಪ್ಪ ತಮ್ಮ ಬೆಂಬಲಿಗರನ್ನು ಮಾತ್ರ ಪ್ರಮುಖ ಹುದ್ದೆಗಳಿಗೆ ನೇಮಕ ಮಾಡಿದ್ದಾರೆ ಎಂದು ಆರೋಪಿಸಿದರು.
ನವದೆಹಲಿಯಲ್ಲಿ ನಡೆದ ಸಭೆಯಲ್ಲಿ ಅಮಿತ್ ಶಾ, ಫೆಬ್ರವರಿ 10 ರೊಳಗೆ ಯಡಿಯೂರಪ್ಪ, ಸಂತೋಷಜಿ ಮತ್ತು ಮುರಳಿಧರ್ ಸೇರಿದಂತೆ ನಾಲ್ವರ ಸಮಿತಿ ರಚಿಸಿ ಸಮಸ್ಯೆಗಳನ್ನು ಪರಿಹರಿಸಿ ಹೈಕಮಾಂಡ್ಗೆ ವರದಿ ಸಲ್ಲಿಸಬೇಕು ಎಂದು ಸಲಹೆ ನೀಡಿದ್ದರು. ಆದರೆ, ಯಡಿಯೂರಪ್ಪ ಅಮಿತ್ ಶಾ ಆದೇಶ ಉಲ್ಲಂಘಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.