ಸೌಹಾರ್ಧತೆ ಕಡೆಗೆ ನಮ್ಮ ನಡಿಗೆ: ನಾವು ಭಾರತೀಯರು ಸಂಘಟನೆಯಿಂದ ಜಾಥಾ

ಶುಕ್ರವಾರ, 30 ಜನವರಿ 2015 (12:06 IST)
ನಾವು ಭಾರತೀಯರು ಎಂಬ ಸಂಘಟನೆಯು ಸೌಹಾರ್ಧತೆ ಕಡೆಗೆ ನಮ್ಮ ನಡಿಗೆ ಎಂಬ ಬ್ಯಾನರ್ ಅಡಿಯಲ್ಲಿ ಇಂದು ನಗರದ ಆನಂದ್ ರಾವ್ ವೃತ್ತದಿಂದ ಫ್ರೀಡಂ ಪಾರ್ಕ್ ವರೆಗೆ ಕಾಲ್ನಡಿಗೆ ಜಾಥಾವನ್ನು ಹಮ್ಮಿಕೊಂಡಿದ್ದು, ಕೋಮುವಾದದ ವಿರುದ್ಧ ಧನಿ ಎತ್ತಿದೆ.

ಈ ಜಾಥಾದಲ್ಲಿ ಪ್ರಮುಖವಾಗಿ ನಿಡುಮಾಮಿಡಿ ಸ್ವಾಮೀಜಿಗಳು ಪಾಲ್ಗೊಂಡಿದ್ದು, ಅವರ ನೇತೃತ್ವದಲ್ಲಿಯೇ ನಡೆಯುತ್ತಿದೆ. ಜಾಥದಲ್ಲಿ ಭಾರತ ಹಿಂದೂ ರಾಷ್ಟ್ರವಾಗಿದ್ದರೂ ಕೂಡ ಹಲವು ರೀತಿಯ ಧರ್ಮಗಳನ್ನು ಹೊಂದಿದೆ. ಹಾಗಾಗಿ ಸಾಮರಸ್ಯ ಹಾಗೂ ಸೌಹಾರ್ಧತೆ ಕಡೆಗೆ ನಾವೆಲ್ಲರೂ ನಡೆಯಬೇಕಿದೆ ಎಂಬುದಾಗಿ ಅರಿವು ಮೂಡಿಸಲಾಗುತ್ತಿದೆ.

ಪ್ರತಿಭಟನೆಯಲ್ಲಿ ಸಾಹಿತಿ ಮುರುಳ ಸಿದ್ದಪ್ಪ, ಹೆಚ್.ಎಸ್. ದೊರೆಸ್ವಾಮಿ, ಬಂಜಗೆರೆ ಜಯಪ್ರಕಾಶ್, ಖ್ಯಾತ ಪತ್ರಕರ್ತ ದಿನೇಶ್ ಅಮ್ಮಿನ್ ಮಟ್ಟು ಸೇರಿದಂತೆ ಇತರೆ ಮುಖಂಡರು ಭಾಗಿಯಾಗಿದ್ದರು.

ವೆಬ್ದುನಿಯಾವನ್ನು ಓದಿ