ವಸತಿ ಇಲಾಖೆಗೆ ಸಿಎಂ ಸಿದ್ದರಾಮಯ್ಯ ಕೋಟಿ ಕೋಟಿ ರೂಪಾಯಿಗಳನ್ನು ನೀಡಿದ್ದಾರೆ. ಆದರೆ, ಆ ಇಲಾಖೆಯ ಮಂತ್ರಿ ಬಾಯಿ ಬಿಡುವುದಿಲ್ಲ. ಇಂತಹವರಿಂದ ಸರಕಾರದ ಸಾಧನೆ ಪ್ರಚಾರ ಹೇಗೆ?ವಸತಿ ಇಲಾಖೆ ಸಚಿವ ಅಂಬರೀಷ್ ವಿರುದ್ಧ ಮಾಜಿ ಸಂಸದ ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತವಿರುವ ಸಚಿವರನ್ನು ಮುಂದುವರಿಸಿದರೆ ಮುಂದಿನ ಬಾರಿ ಕಾಂಗ್ರೆಸ್ ಪಕ್ಷ ಅದಿಕಾರಕ್ಕೆ ಬರುವುದಿಲ್ಲ. ಇಂತಹವರನ್ನು ಇಟ್ಟುಕೊಂಡಲ್ಲಿ ಚುನಾವಣೆ ಎದುರಿಸಲು ಸಾಧ್ಯವಿಲ್ಲ. ಒಂದು ವೇಳೆ, ಚುನಾವಣೆ ಎದುರಿಸಿದರೂ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.