ದಾಳಿಗೆ ಸಿದ್ಧ: ಮತ್ತೆ ಉದ್ಧಟತನ ಮೆರೆದ ಪಾಕ್

ಶುಕ್ರವಾರ, 27 ಫೆಬ್ರವರಿ 2015 (10:31 IST)
ಪಾಕಿಸ್ತಾನವು ನಿನ್ನೆ ಬಿಎಸ್ ಎಫ್ ನೆಲೆಗಳನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಿದ್ದಲ್ಲದೆ, ಪಾಕ್ ಸೇನಾಧಿಕಾರಿಗಳು  ದಾಳಿಯನ್ನು ಎದುರಿಸಲು ನಾವು ಸಿದ್ಧ ಎಂಬ ಉದ್ಧಟತನದ ಹೇಳಿಕೆಯನ್ನು ಭಾರತಕ್ಕೆ ರವಾನಿಸಿದ್ದಾರೆ. 
 
ಹೌದು, ದೇಶ ಹಾಗೂ ಪಾಕ್ ಗಡಿ ಹೊಂದಿಕೊಂಡಿರುವ ಕಾಶ್ಮೀರದ ಹಲವು ಪ್ರದೇಶಗಳಲ್ಲಿ ಪಾಕ್ ನಿನ್ನೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿತ್ತು. ಇದಕ್ಕೆ ದೇಶೀಯ ಯೋಧರೂ ಕೂಡ ತಕ್ಕ ಉತ್ತರ ನೀಡಿದ್ದರು. ಆದರೆ ಇಂದು ಬೆಳಗ್ಗೆ ಮಾತನಾಡಿರುವಪಾಕ್ ಸೇನಾಧಿಕಾರಿಗಳು ದಾಳಿಯನ್ನು ಎದುರಿಸಲು ನಾವು ಸಿದ್ಧವಿದ್ದೇವೆ ಎಂದು ಸಂದೇಶ ರವಾನಿಸುವ ಮೂಲಕ ಉದ್ಧಟತನವನ್ನು ಮೆರೆದಿದ್ದಾರೆ. 
 
ವಿದೇಶಾಂಗ ಕಾರ್ಯದರ್ಶಿ ಜೈಶಂಕರ್ ಅವರು ಪಾಕ್‌ಗೆ ಭೇಟಿ ನೀಡುತ್ತಿದ್ದಾರೆ ಎಂಬ ಸಂದೇಶ ಹೊರಬಿದ್ದ ಬೆನ್ನಲ್ಲೇ ಈ ಬೆಳವಣಿಗೆಗಳು ಕಾಣಿಸುತ್ತಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. 

ವೆಬ್ದುನಿಯಾವನ್ನು ಓದಿ