ಕರ್ನಾಟಕ ಬಂದ್ ಕರೆಯಿಂದಾಗಿ ರಾಜ್ಯದ ಜನತೆಗೆ ತೊಂದರೆಯಾಗುತ್ತದೆ. ಕೇವಲ ಬಂದ್ಗೆ ಕರೆ ನೀಡುವುದರಿಂದ ಸುಪ್ರೀಂಕೋರ್ಟ್ ಆದೇಶವನ್ನು ಬದಲಿಸಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವದಲ್ಲಿ ಹೋರಾಟ, ಪ್ರತಿಭಟನೆಗಳಿರಬೇಕು. ಆದರೆ, ಶಾಂತಿಯುತವಾಗಿ ಆಚರಿಸಬೇಕು ಎಂದು ಕರೆ ನೀಡಿದರು.
ಕಾವೇರಿ ಟಿಬ್ಯೂನಲ್ ಪ್ರತಿ ತಿಂಗಳು ತಮಿಳುನಾಡಿಗೆ ನೀರು ಹರಿಸುವಂತೆ ಆದೇಶಿಸಿದೆ. ನ್ಯಾಯಾಧೀಕರಣದ ತೀರ್ಪು ರಾಜ್ಯ ಸರಕಾರಕ್ಕೆ ಮಾರಕವಾಗಿದೆ. ಮುಂದಿನ ವಿಚಾರಣೆ ಆಕ್ಟೋಬರ್ 18 ರಂದು ನಡೆಯಲಿದ್ದು, ಎಲ್ಲಾ ಅಂಶಗಳು ನ್ಯಾಯಾಲಯದ ಮುಂದೆ ಬರಲಿವೆ ಎಂದು ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.