ಸಮಾರಂಭಕ್ಕೆಂದು ರಾಜ್ಯಪಾಲ ವಾಲಾ ಅವರಿಗೆ ಸಿದ್ದೇಶ್ವರ ಬ್ಯಾಂಕ್ ವತಿಯಿಂದ ವಿಶೇಷ ಆಹ್ವಾನ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಲು ರಾಜ್ಯಪಾಲರು ಹೆಲಿಕಾಪ್ಟರ್ನಲ್ಲಿ ತೆರಳುತ್ತಿದ್ದರು. ಹೆಲಿಕಾಪ್ಟರ್ ಇನ್ನೇನು ಲ್ಯಾಂಡ್ ಆಗಬೇಕು ಎಂಬಷ್ಟರಲ್ಲಿ ಹೆಲಿಪ್ಯಾಡ್ ಪಕ್ಕದಲ್ಲಿಯೇ ಇದ್ದ ಮರಗಳ ಪಕ್ಕದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿತು. ಆದರೆ ತಕ್ಷಣವೇ ಎಚ್ಚರಗೊಂಡ ಅಗ್ನಿಶಾಮಕ ಸಿಬ್ಬಂದಿ, ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು.