ಕಡ್ಡಾಯ ಹಾಜರಾತಿ: ಕಾಂಗ್ರೆಸ್‌‌ ಶಾಸಕರಿಗೆ ವಿಪ್‌‌‌‌ ಜಾರಿ

ಸೋಮವಾರ, 4 ಜುಲೈ 2016 (10:31 IST)
ವಿಧಾನಸಭೆ ಸಭಾಪತಿಯಾಗಿ ಶಾಸಕ ಕೆ.ಬಿ.ಕೋಳಿವಾಡ ಆಯ್ಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಆಡಳಿತ ಪಕ್ಷ ಕಾಗ್ರೆಸ್ ತನ್ನ ಎಲ್ಲಾ ಶಾಸಕರಿಗೆ ವಿಪ್ ಜಾರಿಗೊಳಿಸಿದೆ.
 
ಸರಕಾರದ ಮುಖ್ಯ ಸಚೇತಕ ಅಶೋಕ್ ಪಟ್ಟಣ ವಿಪ್ ಜಾರಿಗೊಳಿಸಿದ್ದಾರೆ. ವಿಫ್ ಪ್ರಕಾರ, ವಿಧಾನಸಭೆ ಅಧಿವೇಶನದ ಮೊದಲ ಎರಡು ದಿನ ಕಡ್ಡಾಯವಾಗಿ ಎಲ್ಲಾ ಶಾಸಕರು ಹಾಜರಿರಬೇಕೆಂದು ತಿಳಿಸುತ್ತದೆ.
 
ನಾಳೆಯಿಂದ ವಿಧಾನ ಮಂಡಲ ಉಭಯ ಸದನಗಳ ಅಧಿವೇಶನ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜುಲೈ 6 ರಂದು ಶಾಸಕಾಂಗ ಸಭೆ ಕರೆದಿದ್ದಾರೆ. ಶಾಸಕರ ಅಸಮಾಧಾನ ಸೇರಿದಂತೆ ಹಲವು ಮಹತ್ವದ ವಿಚಾರಗಳ ಕುರಿತು ಚರ್ಚೆಯಾಗುವ ಸಾಧ್ಯತೆ ಇದೆ.

 
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ