ದಿಗ್ವಿಜಯ್ ಸಿಂಗ್ ಯಾರೆಂದು ನನಗೆ ಗೊತ್ತಿಲ್ಲ: ಕಾಗೋಡು

ಮಂಗಳವಾರ, 26 ಆಗಸ್ಟ್ 2014 (16:25 IST)
ರಾಜ್ಯದ ಉಸ್ತುವಾರಿ ಹೊತ್ತಿರುವ ದಿಗ್ವಿಜಯ್ ಸಿಂಗ್ ಯಾರೆಂದು ನನಗೆ ಗೊತ್ತಿಲ್ಲ ಎಂದು ಹೇಳಿಕೆ ನೀಡಿದ್ದ ಸ್ಪೀಕರ್ ಕಾಗೋಡು ತಿಮ್ಮಪ್ಪ ವಿರುದ್ಧ ದಿಗ್ವಿಜಯ್ ಸಿಂಗ್ ಕಿಡಿಕಾರಿದ್ದಾರೆ.
 
ಸರಕಾರದ ವಿರುದ್ಧ ಮನಬಂದಂತೆ ಬಾಲಿಶ ಹೇಳಿಕೆಗಳನ್ನು ನೀಡುತ್ತಿರುವುದು ಪಕ್ಷದ ಹಿರಿಯ ನಾಯಕ ಮತ್ತು ಸ್ಪೀಕರ್ ಹುದ್ದೆಯಲ್ಲಿರುವ ಕಾಗೋಡು ಅವರಿಗೆ ಶೋಭೆ ತರುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
 
ಸಚಿವ ಸ್ಥಾನ ನೀಡುವಂತೆ ಕಾಗೋಡು ತಿಮ್ಮಪ್ಪ ಇಂದು ದಿಗ್ವಿಜಯ್ ಸಿಂಗ್ ಅವರಿಗೆ ಮನವಿ ಮಾಡಿದ್ದರು. ಆದರೆ, ಕೆಲ ಮಾಧ್ಯಮಗಳು ದಿಗ್ವಿಜಯ್ ಸಿಂಗ್ ಯಾರೆಂದು ನನಗೆ ಗೊತ್ತಿಲ್ಲ ಎನ್ನುವ ಹೇಳಿಕೆ ಕುರಿತಂತೆ ವರದಿಗಳು ಪ್ರಕಟಗೊಂಡಾಗ ದಿಗ್ವಿಜಯ್ ಸಿಂಗ್ ಗರಂ ಆಗಿದ್ದಾರೆ.
 
ಉನ್ನತ ಸ್ಥಾನದಲ್ಲಿರುವವರು ಯಾವುದೇ ಹೇಳಿಕೆಗಳನ್ನು ನೀಡುವಾಗ ಎಚ್ಚರದಿಂದಿರಬೇಕು ಎಂದು ದಿಗ್ವಿಜಯ್ ಸಿಂಗ್ ಕಾಗೋಡು ತಿಮ್ಮಪ್ಪ ಅವರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.   

ವೆಬ್ದುನಿಯಾವನ್ನು ಓದಿ