ವಿಧಾನಸಭೆಯಲ್ಲಿ ಶಾಸಕರ ಗೈರಿಗೆ ಯೋಗ ದಿನ ಕಾರಣವಂತೆ!

ಬುಧವಾರ, 21 ಜೂನ್ 2017 (11:26 IST)
ಬೆಂಗಳೂರು: ವಿಧಾನಸಭೆ ಕಲಾಪದಲ್ಲಿ ಇಂದು ಶಾಸಕರು ಗೈರಾಗಿರುವುದು ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಸ್ವಾರಸ್ವ್ಯಕರ ಚರ್ಚೆಗೆ ಕಾರಣವಾಯಿತು.

 
ಸಿಎಂ ಸಿದ್ಧರಾಮಯ್ಯ ಮಾತನಾಡಲು ಎದ್ದು ನಿಲ್ಲುತ್ತಿದ್ದಂತೆ ಪ್ರತಿಪಕ್ಷ ಸದಸ್ಯರು ‘ನೋಡ್ರೀ.. ಮುಖ್ಯಮಂತ್ರಿಗಳು ಉತ್ತರ ಹೇಳಲು ಎದ್ದು ನಿಂತರೆ ಕೇಳಿಸಿಕೊಳ್ಳಲು ಆಡಳಿತ ಪಕ್ಷದ ಸದಸ್ಯರೇ ಇಲ್ಲ’ ಎಂದು ಕಿಚಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ‘ಎಲ್ಲರೂ ಯೋಗ ದಿನಾಚರಣೆಗೆ ಹೋಗಿದ್ದಾರೆ. ನೋಡಿ ನಿಮ್ಮಲ್ಲೂ ಹಲವರು ಆಬ್ಸೆಂಟ್. ಅವರೂ ಹಾಗೇ ಹೋಗಿರ್ತಾರೆ’ ಎಂದು ಹಾಸ್ಯ ಚಟಾಕಿ ಹಾರಿಸುವ ಮೂಲಕ ಇಂದಿನ ಕಲಾಪ ಆರಂಭವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ