ರಾಘವೇಶ್ವರ ಶ್ರೀಗಳು ಒಬ್ಬ ಸಮರ್ಥ ಪುರುಷರೆಂಬ ಬಗ್ಗೆ ವಿವಾದವಿಲ್ಲ.
ಹೀಗಾಗಿ ವೈದ್ಯಕೀಯ ಪರೀಕ್ಷೆ ನಡೆಸುವ ಔಚಿತ್ಯವೇನು ಎಂದು ಶ್ರೀಗಳ ಪರ ವಕೀಲ ರಾಘವನ್ ಪ್ರಶ್ನಿಸಿದ್ದಾರೆ. ವೈದ್ಯಕೀಯ ಪರೀಕ್ಷೆಯಿಂದ ಶ್ರೀಗಳ ಖಾಸಗಿತನಕ್ಕೆ ಧಕ್ಕೆಯಾಗುತ್ತದೆ ಎಂದೂ ಅವರು ವಾದಿಸಿದರು.ಸಿಐಡಿ ನೋಟಿಸ್ನಲ್ಲಿ ವೈದ್ಯಕೀಯ ಪರೀಕ್ಷೆಯ ಸಮಯ, ಸ್ವರೂಪ ತಿಳಿಸಿಲ್ಲ ಎಂದೂ ರಾಘವನ್ ವಾದಿಸಿದರು.