ಮೈಸೂರಿನ ಎಚ್.ಡಿ.ಕೋಟೆಯಲ್ಲಿ ನಾಲ್ಕು ಕಾಡಾನೆಗಳು ಪ್ರತ್ಯಕ್ಷವಾಗಿದ್ದು, ರೈತರು ಬೆಳೆದಿದ್ದ ಬಾಳೆ, ಬತ್ತದ ಬೆಳೆಯನ್ನು ಸಂಪೂರ್ಣವಾಗಿ ನಾಶ ಮಾಡಿವೆ. ರಸ್ತೆ ಬದಿ ನಿಲ್ಲಿಸಿದ್ದ ಆಟೋ, ಬೈಕ್ಗಳನ್ನು ಕೂಡ ಕಾಡಾನೆಗಳು ಜಖಂ ಮಾಡಿವೆ. ಈಗ ಸಂತೆ ಮುಗಿದ ಮೇಲೆ ಕಾಡಾನೆಗಳನ್ನು ಕಾಡಿಗೆ ಕಳಿಸುವ ಕಾರ್ಯಾಚರಣೆ ಮಾಡುವುದಾಗಿ ಅರಣ್ಯಾಧಿಕಾರಿಗಳು ಹೇಳಿದ್ದಾರೆ.