ಮೋದಿ ತುಮಕೂರಿನಲ್ಲಿ ಚೌಡೇಶ್ವರಿ ದೇವಿ ದರ್ಶನ ಮಾಡ್ತಾರಾ?

ಸೋಮವಾರ, 22 ಸೆಪ್ಟಂಬರ್ 2014 (12:11 IST)
8 ವರ್ಷಗಳ ಹಿಂದೆ ಸಮಸ್ಯೆಗಳ ಸುಳಿಗೆ ಸಿಲುಕಿದ್ದ ಮೋದಿ ತುಮಕೂರಿನ ದಸರಗುಟ್ಟದ ಚೌಡೇಶ್ವರಿ ದೇವಿಯನ್ನು ದರ್ಶನ ಮಾಡಿದಾಗ ಮೋದಿ ಪ್ರಧಾನಿಯಾಗ್ತಾರೆ ಎಂದು ಭವಿಷ್ಯ ನುಡಿದಿತ್ತು ಇದೀಗ ದೇವಿಯ ಭವಿಷ್ಯ ನಿಜವಾಗಿದೆ.  2006ರಲ್ಲಿ ನರೇಂದ್ರ ಮೋದಿ ಗುಜರಾತಿನ ಮುಖ್ಯಮಂತ್ರಿಗಳಾಗಿದ್ದಾಗ ಅನೇಕ ಆರೋಪಗಳಿಗೆ ತುತ್ತಾಗಿ ತೀವ್ರ ನೊಂದಿದ್ದರು. 
 
 ಮೋದಿಯ ವಿರುದ್ಧ ಕೋಮು ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದ ಆರೋಪ ಕೇಳಿಬಂದಿತ್ತು. ಆಗ ರವಿಶಂಕರ್ ಗುರೂಜಿ ಅವರ ಸಲಹೆಯನ್ನು ಕೇಳಲು ಸಂಪರ್ಕಿಸಿದಾಗ ಚೌಡೇಶ್ವರಿ ದೇವಿಯ ದರ್ಶನ ಮಾಡುವಂತೆ ಗುರೂಜಿ ಸೂಚಿಸಿದ ಹಿನ್ನೆಲೆಯಲ್ಲಿ ಮೋದಿ ಚೌಡೇಶ್ವರಿ ದೇವಿಯ ದರ್ಶನ ಮಾಡಿದ್ದಾಗ ದೇವಿ ಮೋದಿ ಅವರಿಗೆ ನೀವು ಪ್ರಧಾನಿಯಾಗುತ್ತೀರೆಂದು ಭವಿಷ್ಯ ನುಡಿದಿತ್ತು. 

ದೇವಿಯ ಭವಿಷ್ಯದಂತೆ ಮೋದಿ 8 ವರ್ಷಗಳ ನಂತರ ಪ್ರಧಾನಿ ಪಟ್ಟವನ್ನು ಅಲಂಕರಿಸಿದ್ದಾರೆ. ಈಗ ಮೋದಿ  ಸೆಪ್ಟೆಂಬರ್ 24ರಂದು ಫುಡ್‌ಪಾರ್ಕ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಲು  ತುಮಕೂರಿಗೆ ಭೇಟಿ ನೀಡುತ್ತಿದ್ದು ಚೌಡೇಶ್ವರಿ ದೇವಿಯ ದರ್ಶನ ಮಾಡಿ ಆಶೀರ್ವಾದ ಪಡೆಯುತ್ತಾರೆಯೇ ಎನ್ನುವುದು ಎಲ್ಲರ ಕುತೂಹಲ ಕೆರಳಿಸಿದೆ.  

ವೆಬ್ದುನಿಯಾವನ್ನು ಓದಿ