ಕಾಂಗ್ರೆಸ್ ಈ ಮಸೂದೆಗೆ ತೀವ್ರ ಪ್ರತಿರೋಧ ವ್ಯಕ್ತಪಡಿಸಿದ್ದರಿಂದ ಆಗಿನ ರಾಜ್ಯಪಾಲ ಭಾರದ್ವಾಜ್ ರಾಷ್ಟ್ರಪತಿಗಳ ಅವಗಾಹನೆಗೆ ಇದನ್ನು ಕಳಿಸಿದ್ದರು. ರಾಷ್ಟ್ರಪತಿ ಈ ಕುರಿತು ಸ್ಪಷ್ಟೀಕರಣ ಕೇಳಿದ್ದರು.ಈಗ ಕಾಂಗ್ರೆಸ್ ಮಸೂದೆಯನ್ನು ವಾಪಸ್ ಪಡೆದಿದೆ. ಮಸೂದೆ ಹಿಂತೆಗೆದುಕೊಂಡಿದ್ದರಿಂದ ಕರ್ನಾಟಕ ಗೋವಧೆ ಪ್ರತಿಬಂಧಕ ಮತ್ತು ಗೋಸಂರಕ್ಷಣೆ ಕಾಯ್ದೆ 1964ರ ಮರುಸ್ಥಾಪನೆಯಾಗಿದೆ.