ಸಾವಿನಲ್ಲೂ ಪತಿಯನ್ನು ಹಿಂಬಾಲಿಸಿದ ಸತಿ

ಶುಕ್ರವಾರ, 17 ಫೆಬ್ರವರಿ 2017 (16:49 IST)
ಪತಿಯ ಸಾವಿನಿಂದ ನೊಂದಿದ್ದ ಪತ್ನಿ, ಆತನ ಅಗಲಿಕೆ ನೋವನ್ನು ತಾಳಲಾರದೆ ಆತ್ಮಹತ್ಯೆಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ಚಿಕ್ಕಬಳ್ಳಾಪುರದ ಚಿಂತಾಮಣಿಯಲ್ಲಿ ನಡೆದಿದೆ.

25 ವರ್ಷದ ನಂದಿನಿ ಅಲಿಯಾಸ್ ನಂಜಮ್ಮ ಎಂದು ಮೃತ ಮಹಿಳೆಯಾಗಿದ್ದಾರೆ. ವೆಂಕಟಗಿರಿ ಕೋಟೆ ಬಳಿಯ ಟ್ಯಾಂಕ್ ಬಂಡೆ ರಸ್ತೆಯಲ್ಲಿನ ನಿರ್ಮಾಣ ಹಂತದ ಕಟ್ಟಡದಲ್ಲಿ ಅವರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
 
ಘಟನೆ ವಿವರ: ಬೆಂಗಳೂರಿನ ಆವಲಹಳ್ಳಿ ಬಳಿಯ ಎಟಿಎಂ ಒಂದರಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಆನಂದಾಚಾರಿ ಕರ್ತವ್ಯದಲ್ಲಿದ್ದಾಗ ಹೃದಯಾಘಾತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಸುದ್ದಿ ತಿಳಿದ ಪತ್ನಿ ಬೆಂಗಳೂರಿಗೆ ಧಾವಿಸಿ ನಿಂತಿದ್ದಾಳೆ. ಅಷ್ಟರಲ್ಲಿ ಆತ ಸಾವನ್ನಪ್ಪಿದ ಸುದ್ದಿ ಹರಿದು ಬಂದಿದ್ದು, ಅದನ್ನು ಸಹಿಸಲಾಗದ ಆಕೆ ಆತ್ಮಹತ್ಯೆಗೆ ಶರಣಾಗಿದ್ದಾಳೆ.
 
ಒಂದೇ ದಿನ ಮಗ ಸೊಸೆಯನ್ನು ಕಳೆದುಕೊಂಡ ಆನಂದಾಚಾರಿ ಕುಟುಂಬದ ದುಃಖ ಮುಗಿಲು ಮುಟ್ಟಿದೆ.
 

ವೆಬ್ದುನಿಯಾವನ್ನು ಓದಿ