ಪಾಯ ತೋಡುತ್ತಿದ್ದ ವೇಳೆ ಮಣ್ಣು ಕುಸಿದು ಕಾರ್ಮಿಕ ಸಾವು

ಸೋಮವಾರ, 1 ಸೆಪ್ಟಂಬರ್ 2014 (15:45 IST)
ಬೆಂಗಳೂರಿನ ಶಿವಾಜಿನಗರದಲ್ಲಿ ಪಾಯ ಅಗೆಯುತ್ತಿದ್ದ ವೇಳೆ ಮಣ್ಣು ಕುಸಿದು ಕಾರ್ಮಿಕನೊಬ್ಬ ಮೃತಪಟ್ಟ ದಾರುಣ ಘಟನೆ ನಡೆದಿದೆ. ಬಿಹಾರ ಮೂಲದ ಮೂವರು ಕಾರ್ಮಿಕರು ಮಣ್ಣಿನಲ್ಲಿ ಸಿಲುಕಿಕೊಂಡು ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದು, ಮುನ್ನಾ ಎಂಬ ಕಾರ್ಮಿಕ ಮೃತಪಟ್ಟಿದ್ದಾನೆ.

ಊಟದ ಸಮಯವಾಗಿದ್ದರಿಂದ ಉಳಿದವರೆಲ್ಲಾ ಹೊರಗೆ ಹೋಗಿದ್ದು ಕೇವಲ ಮೂವರು ಮಾತ್ರ ಕೆಲಸ ಮಾಡುತ್ತಿದ್ದಾಗ ಮಣ್ಣು ಕುಸಿದುಬಿದ್ದಿತ್ತು. ಕಟ್ಟಡ ನಿರ್ಮಾಣಕ್ಕಾಗಿ ಪಾಯ ಅಗೆಯುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಅವಶೇಷಗಳ ಅಡಿಯಲ್ಲಿ ಸಿಕ್ಕಿಬಿದ್ದ ರಾಜಕುಮಾರ್, ಸಾಧಿಕ್  ಎಂಬವರನ್ನು ರಕ್ಷಿಸಿ ಆಸ್ಪತ್ರೆಗೆ ಸೇರಿಸಲಾಗಿದೆ. ಮಾಲೀಕನ ವಿರುದ್ಧ ಶಿವಾಜಿನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ರಾಜರಾಜೇಶ್ವರಿ ಬಿಲ್ಡರ್ಸ್, ವತ್ಸಲಾ ಕನ್‌ಸ್ಟ್ರಕ್ಷನ್ಸ್ ಎಂಬ ಎರಡು ಕಂಪನಿಗಳು ಕೆಲಸ ಮಾಡಿಸುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ನಿವೃತ್ತ ಡಿಐಜಿ ನಿಜಾಮುದ್ದೀನ್ ಎಂಬವರಿಗೆ ಈ ಜಾಗ ಸೇರಿದೆ.
 

ವೆಬ್ದುನಿಯಾವನ್ನು ಓದಿ