ಅಕ್ರಮ ಗಣಿಗಾರಿಕೆ ಹೋರಾಟ ಕೈಬಿಡುವಂತೆ ಯಡಿಯೂರಪ್ಪ ಜನಸಂಗ್ರಾಮ ಪರಿಷತ್ ಸದಸ್ಯರಿಗೆ ಹಣದ ಆಮಿಷ ಒಡ್ಡಿದ್ದಾರೆಂದು ಜನಸಂಗ್ರಾಮ ಪರಿಷತ್ ಅಧ್ಯಕ್ಷರೂ ಆಗಿರುವ ಎಸ್. ಆರ್. ಹಿರೇಮಠ್ ಗಂಭೀರ ಆರೋಪ ಮಾಡಿದ್ದಾರೆ.
ಕೊಪ್ಪಳ, ರಾಯಚೂರು ಬಿಜೆಪಿ ಮುಖಂಡರ ಮೂಲಕ ಹಣದ ಆಮಿಷ ಒಡ್ಡಲಾಯಿತೆಂದು ಎಸ್.ಆರ್. ಹಿರೇಮಠ್ ಧಾರವಾಡದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ನೀವು ಎಂದೂ ನೋಡಿರದಷ್ಟು ಹಣ ನೀಡುತ್ತೇವೆ. ಆರಾಮವಾಗಿರಿ, ಹೋರಾಟ ಕೈಬಿಡಿ ಎಂದು ಈ ಸಂದರ್ಭದಲ್ಲಿ ಆಮಿಷ ಒಡ್ಡಿದ್ದಾರೆಂದು ಅವರು ದೂರಿದರು.
ಯಾರಿಗೆ ಆಮಿಷ ಒಡ್ಡಲಾಗಿದೆಯೋ ಅವರನ್ನೇ ಕರೆತರುತ್ತೇನೆ ಎಂದು ಹಿರೇಮಠ್ ಸ್ಪಷ್ಟಪಡಿಸಿದರು. ಆದರೆ ಯಾವುದೇ ಕಾರಣಕ್ಕೂ ತಾವು ಹೋರಾಟ ನಿಲ್ಲಿಸುವುದಿಲ್ಲ ಎಂದೂ ಹಿರೇಮಠ್ ಸ್ಪಷ್ಟಪಡಿಸಿದರು.