ಯುಗಾದಿ ಹಬ್ಬದ ದಿನವೂ ಪ್ರಚಾರಕ್ಕಿಳಿದ ಯಡಿಯೂರಪ್ಪ

ಬುಧವಾರ, 29 ಮಾರ್ಚ್ 2017 (15:31 IST)
ಯುಗಾದಿ ಹಬ್ಬದ ದಿನವೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಚುನಾವಣೆ ಪ್ರಚಾರಕ್ಕಿಳಿದು ಅಚ್ಚರಿ ಮೂಡಿಸಿದ್ದಾರೆ.
 
ಯಡಿಯೂರಪ್ಪ ಅವರೊಂದಿಗೆ ಮಾಡಿ ಸಚಿವ ರೇಣುಕಾಚಾರ್ಯ ಸಾಥ್ ನೀಡಿದ್ದು, ಗುಂಡ್ಲುಪೇಟೆ ಪಂಚಾಯಿತಿ ಸದಸ್ಯ ವೀರಣ್ಣ ಮನೆಯಲ್ಲಿ ಹಬ್ಬದೂಟ ಸವಿದಿದ್ದಾರೆ.
 
ಚೌಡಹಳ್ಳಿ, ಶೆಟ್ಟಹಳ್ಳಿಯಲ್ಲಿರುವ ಪ್ರತಿಯೊಂದು ಮನೆಗೆ ಮನೆಗೆ ಭೇಟಿ ನೀಡಿದ ಅವರು, ಬಿಜೆಪಿ ಪಕ್ಷದ ಪರವಾಗಿ ಮತಚಲಾಯಿಸುವಂತೆ ಮತದಾರರಲ್ಲಿ ಮನವಿ ಮಾಡಿದ್ದಾರೆ.
 
ಏ.9 ರಂದು ನಡೆಯಲಿರುವ ಉಪಚುನಾವಣೆ ಬಿಜೆಪಿ ಕಾಂಗ್ರೆಸ್ ಪಾಲಿಗೆ ಜಿದ್ದಾಜಿದ್ದಿನ ಕಣವಾಗಿದ್ದು ಪ್ರತಿಷ್ಠೆಯ ಚುನಾವಣೆಯಾಗಿ ಮಾರ್ಪಟ್ಟಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ