ನಮ್ಮ ಪ್ರಧಾನಿಗಳ ಕೂದಲಿನ ಯೋಗ್ಯತೆ ನಿಮಗಿಲ್ಲ: ಕರಾಳ ಸಂಸದೆ ಶೋಭಾ ಟೀಕೆ

ಶನಿವಾರ, 3 ಅಕ್ಟೋಬರ್ 2015 (16:28 IST)
ಇಂದು ರಾಜ್ಯ ಬಿಜೆಪಿ ಘಟಕವು ಹಮ್ಮಿಕೊಂಡಿದ್ದದ ರೈತ ಚೈತನ್ಯ ಯಾತ್ರೆ ವೇಳೆ ಸಂಸದೆ ಶೋಭಾ ಕರಾಂದ್ಲಾಜೆ ಅವರು ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಿದ್ದರಾಮಯ್ಯನವರೇ ನಿಮಗೆ ನಮ್ಮ ಪ್ರಧಾನಿಗಳ ಕೂದಲಿನ ಯೋಗ್ಯತೆಯೂ ಇಲ್ಲ ಎಂದು ಕಟುವಾಗಿ ಟೀಕಿಸಿದ್ದಾರೆ.
 
ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಅವರೇ ನೀವು ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದೀರಿ. ನಮ್ಮ ಸರ್ಕಾರ ಜಾರಿಗೆ ಬಂದು ಒಂದು ವರ್ಷವಾಗಿದೆಯಷ್ಟೇ. ಆದರೆ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ನಿಮ್ಮ ಸರ್ಕಾರ ಜಾರಿಗೆ ಬಂದು ಎರಡೂ ವರೆ ವರ್ಷ ಆಗಿದೆ. ಆದರೆ ನಿಮ್ಮ ಸಾಧನೆ ಏನು ತೋರಿಸಿ ಎಂದ ಅವರು, ಸಿದ್ದರಾಮಯ್ಯ ಅವರೇ ನೀವು ನಮ್ಮ ಪ್ರಧಾನಿಯ ಬಗ್ಗೆ ಅವಹೇಳನವಾಗಿ ಮಾತನಾಡಬೇಡಿ, ಅವರ ಕೂದಲಿನ ಯೋಗ್ಯತೆ ನಿಮಗಿಲ್ಲ ಎಂದು ತೀವ್ರ ವಾಗ್ದಾಳಿ ನಡೆಸಿದರು. 
 
ಇನ್ನು ರಾಜ್ಯದಲ್ಲಿ ಕಳಸಾ-ಬಂಡೂರಿ ಯೋಜನೆಯ ಜಾರಿಗಾಗಿ ಕಿಚ್ಚು ಹೆಚ್ಚಿದ್ದು, ಈ ಸಂಬಂಧ ಸರ್ವಪಕ್ಷಗಳ ನಿಯೋಗವನ್ನು ನವದೆಹಲಿಗೆ ಕರೆದೊಯ್ಯಲಾಗಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಸಮಸ್ಯೆ ಬಗೆಹರಿಸಲು ಸ್ಪಂಧಿಸುತ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಶೋಭಾ ಕರಾದ್ಲಾಂಜೆ ಅವರು ಈ ರೀತಿಯಾಗಿ ವಾಗ್ದಾಳಿ ನಡೆಸಿದ್ದಾರೆ.  

ವೆಬ್ದುನಿಯಾವನ್ನು ಓದಿ