ಮುಷ್ಕರ ಹೂಡಿದ ಸರ್ಕಾರಿ ವೈದ್ಯರನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡ ಘಟನೆ ಇಂದು ನಡೆದಿದೆ. ನಿಮಗೆ ಮುಷ್ಕರ ಮಾಡಲು ಅಧಿಕಾರ ಕೊಟ್ಟವರು ಯಾರು ಎಂದು ಹೈಕೋರ್ಟ್ ವೈದ್ಯರನ್ನು ಪ್ರಶ್ನಿಸಿದೆ. 1200 ವೈದ್ಯರು ಮುಷ್ಕರಕ್ಕಾಗಿ ಬೆಂಗಳೂರಿಗೆ ಬಂದಿದ್ದರು. ಅವರಿಗೆ ರಜೆ ಕೊಟ್ಟವರು ಯಾರು ಎಂದು ರಾಜ್ಯಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.