ಈ ಬಾರಿಯಾದ್ರೂ ಗೆಲ್ಸಿ, ಇಲ್ಲದಿದ್ರೆ ಮನೆಗೆ ನಡೀರಿ: ಸಚಿವರಿಗೆ ರಾಹುಲ್ ಎಚ್ಚರಿಗೆ

ಬುಧವಾರ, 29 ಜುಲೈ 2015 (15:46 IST)
ಬಿಬಿಎಂಪಿ ಚುನಾವಣೆಯು ಹತ್ತಿರ ಸುಳಿಯುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಉಪಾಧ್ಯಾಕ್ಷ ರಾಹುಲ್ ಗಾಂಧಿ ಅವರು ಅದಾಗಲೇ ರಾಜ್ಯ ಕಾಂಗ್ರೆಸ್‌ನ ಐವರು ಸಚಿರತ್ತ ಏರು ಧ್ವನಿ ಎತ್ತಿದ್ದು, ಪಾಲಿಕೆ ಚುನಾವಣೆಯಲ್ಲಿ ನಮ್ಮದೇ ಪಕ್ಷ ಜಯ ಸಾಧಿಸಬೇಕು. ಇಲ್ಲವಾದಲ್ಲಿ ತಲೆ ದಂಡಕ್ಕೆ ಸಿದ್ಧರಾಗಿ ಎಂದು ಖಡಕ್ಕಾಗಿ ಸೂಚಿಸಿದ್ದಾರೆ.  
 
ಸಿಎಂ ಸಿದ್ದರಾಮಯ್ಯ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಪರಮೇಶ್ವರ್ ಅವರ ಗಮನಕ್ಕೆ ತರುವ ಮೂಲಕ ಐವರು ಸಚಿವರಿಗೆ ಈ ಖಡಕ್ ಎಚ್ಚರಿಕೆ ನೀಡಿದ್ದಾರೆ. 
 
ಬೆಂಗಳೂರಿನ ಮೂಲ ನಿವಾಸಿಗಳಾದ ಹಾಗೂ ಬೆಂಗಳೂರಿನಲ್ಲಿಯೇ ಶಾಸಕರಾಗಿ ಆಯ್ಕೆಯಾಗಿರುವ, ಪ್ರಸ್ತುತ ರಾಜ್ಯ ಸರ್ಕಾರದಲ್ಲಿ ವಿವಿಧ ಖಾತೆಗಳನ್ನು ನಿಭಾಯಿಸುತ್ತಿರುವ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ದಿನೇಶ್ ಗುಂಡೂರಾವ್, ಗೃಹ ಸಚಿವ ಕೆ.ಜೆ.ಜಾರ್ಜ್, ವಾರ್ತಾ ಸಚಿವ ರೋಷನ್, ಕೃಷಿ ಸಚಿವ ಕೃಷ್ಣಭೈರೇಗೌಡ ಹಾಗೂ ಸಾರಿಗೆ, ಬೆಂಗಳೂರು ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಈ ರೀತಿಯಾಗಿ ಖಡಕ್ ಎಚ್ಚರಿಕೆ ನೀಡಿದ್ದಾರೆ. 
 
ಮೂಲಗಳ ಪ್ರಕಾರ, ಈ ಹಿಂದಿನ ಚುನಾವಣೆಯಲ್ಲಿಯೇ ನಾವು ಜಯ ಸಾಧಿಸುತ್ತೇವೆ ಎಂಬ ಭರವಸೆ ಇತ್ತು. ಆದರೆ ಅದು ಹುಸಿಯಾಯಿತು. ಈ ಹಿನ್ನೆಲೆಯಲ್ಲಿ ಈ ಬಾರಿಯಾದರೂ ನಾವು ಗೆಲ್ಲಲೇಬೇಕು. ಹಾಗಾಗಿ ಸಚಿವರುಗಳಿಗೆ ಈ ಜವಾಬ್ದಾರಿಯನ್ನು ನೀಡುತ್ತಿದ್ದು, ಚುನಾವಣೆಯಲ್ಲಿ ಜಯ ಸಾದಿಸಿ ನಮ್ಮದೇ ಪಕ್ಷ ಅಧಿಕಾರಿಕ್ಕೆ ಬರಬೇಕು. ಇಲ್ಲವಾದಲ್ಲಿ ಸಚಿವ ಸ್ಥಾನದ ತಲೆದಂಡ ಖಚಿತ ಎಂಬ ಎಚ್ಚರಿಕೆಯನ್ನು ರವಾನಿಸಿದ್ದಾರೆ ಎನ್ನಲಾಗಿದೆ.  

ವೆಬ್ದುನಿಯಾವನ್ನು ಓದಿ