ನನ್ನ ರುಂಡ ಕತ್ತರಿಸಿಕೊಳ್ಳುತ್ತಾರಂತೆ ಜಮೀರ್ ಅಹಮ್ಮದ್!

ಶನಿವಾರ, 22 ಜುಲೈ 2017 (12:05 IST)
ಬೆಂಗಳೂರು: ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕಾರಣಿಗಳ ‘ಕತ್ತರಿಸುವ’ ಹೇಳಿಕೆಗಳು ಮತ್ತೆ ಶುರುವಾಗಿದೆ. ಇದೀಗ ಜೆಡಿಎಸ್ ನಿಂದ ಉಚ್ಛಾಟನೆಗೊಂಡಿರುವ ಜಮೀರ್ ಅಹಮ್ಮದ್ ಅಂತಹದ್ದೇ ಹೇಳಿಕೆ ನೀಡಿದ್ದಾರೆ.


ಮುಂಬರುವ ಚುನಾವಣೆಯಲ್ಲಿ ಚಾಮರಾಜಪೇಟೆಯಲ್ಲಿ ಜೆಡಿಎಸ್ ನಿಂದ ಬೇರೆ ಅಭ್ಯರ್ಥಿ ಗೆಲ್ಲುವುದು ಕನಸಿನ ಮಾತು ಎಂದ ಅವರು, ಒಂದು ವೇಳೆ ಜೆಡಿಎಸ್ ಅಭ್ಯರ್ಥಿ ಗೆದ್ದರೆ ಇದೇ ಮಾಧ್ಯಮದವರ ಮುಂದೆ ನನ್ನ ರುಂಡ ಕತ್ತರಿಸಿ ಇಡುತ್ತೇನೆ. ಇದು ದೇವೇಗೌಡರಿಗೆ ನನ್ನ ಓಪನ್ ಚಾಲೆಂಜ್ ಎಂದು  ಸವಾಲೆಸೆದಿದ್ದಾರೆ.

ಚಾಮರಾಜಪೇಟೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲುವುದರಿಲಿ, ಠೇವಣಿಯೂ ಬರಲ್ಲ ನೋಡ್ತಾ ಇರಿ ಎಂದು ಜಮೀರ್ ಹೇಳಿಕೊಂಡಿದ್ದಾರೆ. ಜೆಡಿಎಸ್ ನಿಂದ ಪದಚ್ಯುತಗೊಂಡಿರುವ ಜಮೀರ್ ಅಹಮ್ಮದ್  ಇದೀಗ ಅತಂತ್ರ ಸ್ಥಿತಿಯಲ್ಲಿದ್ದಾರೆ.

ಇದನ್ನೂ ಓದಿ..  ಮಧು ಬಂಗಾರಪ್ಪಗೆ ಯಡಿಯೂರಪ್ಪ ತಿರುಗೇಟು

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ