ಕಾಂಗ್ರೆಸ್ ಪಕ್ಷವೇ ವಿಷಪೂರಿತವಾಗಿದೆ: ಮೀರತ್‌ನಲ್ಲಿ ಮೋದಿ ವಾಗ್ದಾಳಿ

ಶುಕ್ರವಾರ, 14 ಮಾರ್ಚ್ 2014 (15:20 IST)
PR
ಉತ್ತರಪ್ರದೇಶದಲ್ಲಿ ಸೂಕ್ತ ಬೆಲೆ ಸಿಗದೇ ಕಬ್ಬುಬೆಳೆಗಾರರು ಕಂಗಾಲಾಗಿದ್ದಾರೆ. ಗುಜರಾತ್‌ನಲ್ಲಿ 24 ಗಂಟೆ ವಿದ್ಯುತ್ ಪೂರೈಸಲಾಗುತ್ತಿದೆ. ಆದರೆ ಅಖಿಲೇಶ್ ಸರ್ಕಾರ ರಾಜ್ಯವನ್ನು ಕತ್ತಲಲ್ಲಿ ಮುಳುಗಿಸಿದೆ ಎಂದು ಮೀರತ್‌ನಲ್ಲಿ ನಡೆದ ಬಿಜೆಪಿ ಬೃಹತ್ ರ‌್ಯಾಲಿಯಲ್ಲಿ ಕಾಂಗ್ರೆಸ್ ಪ್ರಧಾನಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಕಿಡಿಕಾರಿದರು. ಮೀರತ್ ಸ್ವಾತಂತ್ರ್ಯಯೋಧರ ಪುಣ್ಯಭೂಮಿಯಾಗಿದೆ ಎಂದು ಹೇಳಿದರು. ಕಾಂಗ್ರೆಸ್ ಸರ್ಕಾರದ ವಿರುದ್ಧವೂ ನರೇಂದ್ರ ಮೋದಿ ವಾಗ್ದಾಳಿ ಮಾಡಿದರು. ಸಿಪಾಯಿ ದಂಗೆ ವೇಳೆ ಕಮಲ, ರೋಟಿ ಪ್ರಸ್ತಾಪವಾಗಿತ್ತು.

ಇದರಿಂದಾಗಿ ಕಾಂಗ್ರೆಸ್ ಸರ್ಕಾರ ಸಿಪಾಯಿ ದಂಗೆಯನ್ನು ನಿರ್ಲಕ್ಷಿಸಿದೆ. ದೇಶದಲ್ಲಿ ವಿಷದ ಬೇಸಾಯ ಮಾಡ್ತಿದ್ದಾರೆ ಎಂದು ಹೇಳ್ತಿದ್ದಾರಲ್ಲ. ದೇಶವನ್ನು ಅತಿ ಹೆಚ್ಚು ವರ್ಷ ಕಾಲ ದೇಶದಲ್ಲಿ ಆಡಳಿತ ನಡೆಸಿದೆ ಕಾಂಗ್ರೆಸ್ ಪಕ್ಷ ವಿಷಪೂರಿತವಾಗಿದೆ ಎಂದು ಮೋದಿ ಹೇಳಿದರು. ಕಾಂಗ್ರೆಸ್ ಪಕ್ಷ ವಿಭಜನಕಾರಿ, ವಿಘಟನಕಾರಿ ಪಕ್ಷವಾಗಿದೆ ಎಂದರು.

ವೆಬ್ದುನಿಯಾವನ್ನು ಓದಿ