ಅದೆಂತಾ ಕಾಮ ಕಣ್ರೀ..ಪತಿಯ ಎದುರಿನಲ್ಲೇ ಅತ್ಯಾಚಾರಕ್ಕೆ ಯತ್ನಿಸಿದ ಸಿಟಿ ಬಸ್ ಸಿಬ್ಬಂದಿ
ಸೋಮವಾರ, 31 ಮಾರ್ಚ್ 2014 (19:32 IST)
ದೆಹಲಿಯ ನಿರ್ಭಯಾ ಗ್ಯಾಂಗ್ರೇಪ್ ಪ್ರಕರಣ ಮಾಸುವ ಮುನ್ನವೇ ಮತ್ತೆ ಅಂತಹ ಘಟನೆ ವರದಿಯಾಗುವುದು ಸ್ವಲ್ಪದರಲ್ಲಿಯೇ ತಪ್ಪಿದೆ.
ಸಿಟಿ ಬಸ್ ಚಾಲಕ ಮತ್ತು ಕಂಡಕ್ಟರ್ ಹಾಗೂ ಪ್ರಯಾಣಿಕ ಸೇರಿ ಪತಿಯ ಎದುರಿನಲ್ಲೇ ಪತ್ನಿಯ ಮೇಲೆ ಅತ್ಯಾಚಾರವೆಸಗುವ ಪ್ರಯತ್ನದ ಘಟನೆ ಆಗ್ರಾದ ಫತೇಹಪುರ್ನ ಸಿಕ್ರಿ ನಗರದಲ್ಲಿ ನಡೆದಿದೆ.
ಚಾಲಕ, ಕಂಡಕ್ಟರ್ ಮತ್ತು ಪ್ರಯಾಣಿಕ ಸೇರಿ ಮೂವರು ಮಾತ್ರ ಪ್ರಯಾಣಿಸುತ್ತಿದ್ದ ಸಿಟಿ ಬಸ್ನಲ್ಲಿ. ಮಹಿಳೆ ಮತ್ತು ಆಕೆಯ ಪತಿ ಹಾಗೂ ಆರು ವರ್ಷದ ಮಗುವಿನೊಂದಿಗೆ ಸಿಟಿ ಬಸ್ ಹತ್ತಿದ್ದಾರೆ.
ಚಾಲಕ ಬಸ್ ನಿಲ್ಲಿಸುವವರೆಗೆ ಪ್ರಯಾಣ ಸಾಮಾನ್ಯವಾಗಿ ಸಾಗಿತ್ತು. ಚಾಲಕ ಬಸ್ ನಿಲ್ಲಿಸಿ ಕಂಡಕ್ಟರ್ ಮತ್ತು ಪ್ರಯಾಣಿಕ ಪತಿಯನ್ನು ಥಳಿಸುತ್ತಿದ್ದರೇ ಮತ್ತೊಬ್ಬ ಆರೋಪಿ ಚಾಲಕ ಮಹಿಳೆಯ ಮೇಲೆ ಅತ್ಯಾಚಾರವೆಸಗಲು ಪ್ರಯತ್ನಿಸುತ್ತಿದ್ದ.
ಏತನ್ಮಧ್ಯೆ, ಮಹಿಳೆಯ ಪತಿ ಆರೋಪಿಗಳ ಹಲ್ಲೆಯಿಂದ ಪಾರಾಗುವಲ್ಲಿ ಯಶಸ್ವಿಯಾಗಿ ಜೋರಾಗಿ ಕೂಗುತ್ತಾ ಸಾರ್ವಜನಿಕರನ್ನು ಕರೆಯುವಲ್ಲಿ ಯಶಸ್ವಿಯಾದ. ಸಾರ್ವಜನಿಕರನ್ನು ಕಂಡ ಆರೋಪಿಗಳು ಬಸ್ನ್ನು ಅಲ್ಲಿಯೇ ಬಿಟ್ಟು ಪರಾರಿಯಾದರು.
ಘಟಾನ ಸ್ಥಳಕ್ಕೆ ಬಂದ ಪೊಲೀಸರು ಬಸ್ ವಶಕ್ಕೆ ತೆಗೆದುಕೊಂಡರು. ಹೆಚ್ಚನ ಸಂಖ್ಯೆಯಲ್ಲಿ ಸಾರ್ವಜನಿಕರು ಸೇರಿ ಆಕ್ರೋಶಗೊಂಡು ಬಸ್ ಮೇಲೆ ಕಲ್ಲು ತೂರಾಟ ನಡೆಸಿದರು. ಜನತೆಯ ಕೋಪದಿಂದ ಕಂಗಾಲಾದ ಪೊಲೀಸರು ಆರೋಪಿಗಳಾದ ಬಸ್ ಚಾಲಕ ರೋಹತೇಶ್, ಕಂಡಕ್ಟರ್ ರಜನೀಶ್ ಅವರನ್ನು ಅಚ್ಚೆನ್ನೆರಾ ಮತ್ತು ಮಾಲ್ಪುರಾ ಗ್ರಾಮದಲ್ಲಿ ಬಂಧಿಸುವಲ್ಲಿ ಯಶಸ್ವಿಯಾದರು.
ಬಲಿಪಶುವಾದ ಮಹಿಳೆ ಬಸ್ ಚಾಲಕ, ಕಂಡಕ್ಟರ್ ಮತ್ತು ಅಪರಿಚಿತ ಪ್ರಯಾಣಿಕ ಸೇರಿದಂತೆ ಮೂವರು ಆರೋಪಿಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ
ಮಾಧ್ಯಮಗಳೊಂದಿಗೆ ಮಾತನಾಡಿದ ಸಾಮಾಜಿಕ ಕಾರ್ಯಕರ್ತೆ ಉಮಾ ಶಂಕರ್ ಶರ್ಮಾ, ಸಮಾಜವಾದಿ ಪಕ್ಷದ ಅಡಳಿತದಲ್ಲಿ ಅಪರಾಧಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂದು ಆರೋಪಿಸಿದರು.