ಮಾದರಿ ನಾಯಕ ವಾಜಪೇಯಿ ಸೋದರಸೊಸೆಗೆ ಮಾನಸಿಕ ಹಿಂಸೆ ನೀಡಿದ ಬಿಜೆಪಿ ಮುಖಂಡರು

ಸೋಮವಾರ, 28 ಅಕ್ಟೋಬರ್ 2013 (13:49 IST)
PTI
ಬಿಜೆಪಿ ಪಕ್ಷದಲ್ಲಿ ನಾನು ತುಂಬಾ ಮಾನಸಿಕ ಹಿಂಸೆ ಅನುಭವಿಸಿದ್ದರಿಂದ ಪಕ್ಷಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸೋದರ ಸೊಸೆ ಆರೋಪಿಸಿದ್ದಾರೆ.

ಚತ್ತೀಸ್‌ಗಡ್‌ದ ರಾಜ್ಯ ಬಿಜೆಪಿ ಘಟಕ ತುಂಬಾ ಮಾನಸಿಕ ಹಿಂಸೆ ನೀಡಿದ್ದರಿಂದ ನನ್ನ ಅಗತ್ಯ ಪಕ್ಷಕ್ಕಿಲ್ಲ ಎಂದು ಭಾವಿಸಿ ಪಕ್ಷದ ಹುದ್ದೆಗೆ ರಾಜೀನಾಮೆ ನೀಡಿದ್ದೇನೆ ಎಂದು ಮಾಜಿ ಸಂಸದೆ ಶುಕ್ಲಾ ತಿಳಿಸಿದ್ದಾರೆ.

ಬಿಜೆಪಿಯ ಹಿರಿಯ ಮುಖಂಡರು ಸದಾ ನಿರ್ಲಕ್ಷಿಸುತ್ತಿದ್ದಾರೆ ಎಂದು ಆರೋಪಿಸಿ ಕರುಣಾ ಶುಕ್ಲಾ ಬಿಜೆಪಿಗೆ ಗುಡ್‌ಬೈ ಹೇಳಿದ್ದಾರೆ.

ಬಿಜೆಪಿ ಮುಖಂಡರು ತಮ್ಮನ್ನು ಸಂಪರ್ಕಿಸದೆ ಎಲ್ಲಾ ಹುದ್ದೆಗಳಿಂದ ತಮ್ಮನ್ನು ವಜಾಗೊಳಿಸಿದ್ದಾರೆ. ಪಕ್ಷದಿಂದ ಹೊರಹೊಗುತ್ತಿರುವುದಕ್ಕೆ ದುಖಃವಾಗಿದೆ. ಆದರೆ, ಪಕ್ಷದ ಮುಖಂಡರ ವರ್ತನೆಯಿಂದ ಬಿಜೆಪಿ ತೊರೆಯುವುದು ಅನಿವಾರ್ಯವಾಗಿದೆ ಎಂದು ತಿಳಿಸಿದ್ದಾರೆ.

ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಲು ದೆಹಲಿಯಲ್ಲಿ ಐದು ದಿನಗಳ ಕಾಲ ಠಿಕಾಣಿ ಹೂಡಿದ್ದೆ. ಆದರೆ, ಸಿಂಗ್ ಭೇಟಿಗೆ ಸಮಯ ನಿರಾಕರಿಸಲಾಯಿತು ಎಂದು ವಾಜಪೇಯಿ ಸೋದರ ಸೊಸೆ ಕರುಣಾ ಶುಕ್ಲಾ ವಿಷಾದ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ