ವರ್ಗಾವಣೆ ಮಾಡಿ: ಚುನಾವಣೆ ಆಯೋಗ, ಮಾಡುವುದಿಲ್ಲ: ಮಮತಾ ಖಡಕ್ ಉತ್ತರ

ಮಂಗಳವಾರ, 8 ಏಪ್ರಿಲ್ 2014 (11:31 IST)
PR
PR
ಕೋಲ್ಕತ್ತಾ:ಚುನಾವಣೆ ಆಯೋಗದ ಆದೇಶವನ್ನು ಧಿಕ್ಕರಿಸಿದ ಮಮತಾ ಬ್ಯಾನರ್ಜಿ ರಾಜ್ಯಸರ್ಕಾರದ ಸಲಹೆ ಕೇಳದೇ ವರ್ಗಾವಣೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ವರ್ಗಾವಣೆಯಾಗದಿದ್ದರೆ ಕ್ರಮ ಕೈಗೊಳ್ಳುವುದಾಗಿ ಚುನಾವಣೆ ಆಯೋಗ ತಿಳಿಸಿದೆ. 5 ಎಸ್ಪಿ, ಮೂವರು ಡಿಸಿಗಳನ್ನು ವರ್ಗಾವಣೆ ಮಾಡಬೇಕೆಂದು ಚುನಾವಣೆ ಆಯೋಗ ತಿಳಿಸಿದೆ. ಒಬ್ಬ ಅಧಿಕಾರಿಯನ್ನೂ ಕದಲಿಸಲು ತಾವು ಬಿಡುವುದಿಲ್ಲ,ನನ್ನನ್ನು ಬೇಕಿದ್ದರೆ ಚುನಾವಣೆ ಆಯೋಗ ಬಂಧಿಸಲಿ ಎಂದು ಮಮತಾ ಹೇಳಿದ್ದಾರೆ.

ರಾಜ್ಯದ ಆಡಳಿತ ಉಸ್ತುವಾರಿಯನ್ನು ಕಿತ್ತುಕೊಳ್ಳಲು ಬಿಡುವುದಿಲ್ಲ ಎಂದು ಮಮತಾ ಹೇಳಿದ್ದಾರೆ. ಆದರೆ ಚುನಾವಣೆ ಆಯೋಗ ಖಡಕ್ ಉತ್ತರ ನೀಡಿದ್ದು, ವರ್ಗಾವಣೆ ಮಾಡದಿದ್ದರೆ ಲೋಕಸಭೆ ಚುನಾವಣೆಯನ್ನೇ ರದ್ದು ಮಾಡುವುದಾಗಿ ಎಚ್ಚರಿಸಿದೆ.

ವೆಬ್ದುನಿಯಾವನ್ನು ಓದಿ